Advertisement

ಮುಖ್ಯಮಂತ್ರಿ, ಕೃಷಿ ಸಚಿವರೊಂದಿಗೆ ಕರಾವಳಿ ರೈತ ಸಭೆ –ಸಚಿವ ಸುನೀಲ್

01:49 PM Nov 08, 2021 | Team Udayavani |

ಕೋಟ: ಭತ್ತದ ಬೆಳೆಗೆ ಸಂಬಂಧಪಟ್ಟಂತೆ ಕರಾವಳಿಯ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ರೈತರು ಬ್ರಹ್ಮಾವರದಲ್ಲಿ ನಡೆಸಿದ ಪ್ರತಿಭಟನಾ ಸಭೆ ಕುರಿತು ಮಾಹಿತಿ ಇದೆ ಹಾಗೂ ಸಮಸ್ಯೆಗಳ ಪರಿಹಾರಕ್ಕಾಗಿ ಜನಪರ ರೈತ ವೇದಿಕೆ ವತಿಯಿಂದ ನೀಡಿದ ಮನವಿ ಕೂಡ ಕೈ ಸೇರಿದ್ದು, ಪತ್ರಿಕೆಯ ವರದಿಗಳನ್ನು ಗಮನಿಸಿದ್ದೇನೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ರೈತ ಮುಖಂಡರನ್ನೊಳಗೊಂಡ ನಿಯೋಗದೊಂದಿಗೆ ಮುಖ್ಯ ಮಂತ್ರಿಗಳು, ಕೃಷಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಇಂಧನ ಸಚಿವ ಸುನೀಲ್ ಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.

Advertisement

ರೈತರ ಬೇಡಿಕೆಗಳು ಸಮಂಜಸವಾಗಿದ್ದು ಮುಖ್ಯಮಂತ್ರಿಗಳು, ಕೃಷಿ ಸಚಿವರೊಂದಿಗೆ ಚರ್ಚಿಸಿದರೆ ಸಾಕಷ್ಟು ಸಮಸ್ಯೆ ಬಗೆಹರಿಯಲಿದೆ. ಇದಕ್ಕಾಗಿ ಶೀಘ್ರ ಸಮಯ ನಿಗದಿಪಡಿಸುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next