Advertisement

ಗಂಗಾಸಾಗರ ಮೇಳ: ಪ.ಬಂಗಾಲ ಕರಾವಳಿಗೆ ತಟ ರಕ್ಷಣ ಪಡೆಯ ಬಿಗಿ ಭದ್ರತೆ

10:34 AM Jan 12, 2019 | udayavani editorial |

ಕೋಲ್ಕತ : ಪಾಕ್‌ ಉಗ್ರರು ಭಾರತದ ಕರಾವಳಿಯಲ್ಲಿ ಸಮುಂದರೀ ಜಿಹಾದ್‌ ನಡೆಸುವರೆಂಬ ಗುಪ್ತಚರ ದಳದ ಮಾಹಿತಿಯ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಕರಾವಳಿಯಲ್ಲಿ ಈಗಿನ್ನು ನಡೆಯಲಿರುವ ಗಂಗಾಸಾಗರ ಮೇಳಕ್ಕೆ ಭಾರತೀಯ ತಟ ರಕ್ಷಣ ಪಡೆ ತನ್ನ ಕಣ್ಗಾವಲನ್ನು ತೀವ್ರಗೊಳಿಸಿದೆ ಎಂದು ಉನ್ನತ ಅಧಿಕಾರಿ ತಿಳಿಸಿದ್ದಾರೆ.

Advertisement

ಮಕರ ಸಂಕ್ರಾತಿಯ ಪರ್ವ ಸಂದರ್ಭದಲ್ಲಿ ಹೂಗ್ಲಿ ನದಿ ಮತ್ತು ಬಂಗಾಲ ಕೊಲ್ಲಿ ಸಂಗಮಿಸುವಲ್ಲಿನ ಸಾಗರ ದ್ವೀಪದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ದೇಶಾದ್ಯಂತದಿಂದ ಲಕ್ಷಾಂತರ ಶ್ರದ್ಧಾಳುಗಳು ಇಲ್ಲಿಗೆ ಬರುತ್ತಾರೆ.

ಪಶ್ಚಿಮ ಬಂಗಾಲ ಕರಾವಳಿಗೆ ಪೂರ್ಣ ಭದ್ರತೆ ನೀಡುವ ನಿಟ್ಟಿನಲ್ಲಿ ಭಾರತೀಯ ತಟ ರಕ್ಷಣ ಪಡೆ (ಐಸಿಜಿ) ಹೋವರ್‌ ಕ್ರಾಫ್ಟ್, ಅತ್ಯಧಿಕ ವೇಗದ ಕಾವಲು ಬೋಟುಗಳು ಮತ್ತು ಇಂಟರ್‌ ಸೆಪ್ಟರ್‌ ಬೋಟುಗಳನ್ನು  ಕರ್ತವ್ಯಕ್ಕೆ ನಿಯೋಜಿಸಿದೆ ಎಂದು ಅಧಿಕಾರಿ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next