Advertisement

ಕಲ್ಲಿದ್ದಲು ಹಗರಣದ ಆರೋಪಿ ಜಿಂದಾಲ್‌ಗೆ ವಿದೇಶ ಭೇಟಿ ಅನುಮತಿ

05:40 PM Oct 16, 2018 | Team Udayavani |

ಹೊಸದಿಲ್ಲಿ : ಬಹುಕೋಟಿ ಕಲ್ಲಿದ್ದಲು ಹಗರಣದ ಮುಖ್ಯ ಆರೋಪಿಯಾಗಿರುವ ಕಾಂಗ್ರೆಸ್‌ ನಾಯಕ ಹಾಗೂ ಕೈಗಾರಿಕೋದ್ಯಮಿಯಾಗಿರುವ ನವೀನ್‌ ಜಿಂದಾಲ್‌ ಅವರಿಗೆ ಔದ್ಯಮಿಕ ಉದ್ದೇಶಗಳಿಗಾಗಿ ವಿದೇಶಕ್ಕೆ ಹೋಗಲು ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

Advertisement

ಇದೇ ಅ.15ರಿಂದ 19ರವರೆಗೆ ತನಗೆ ಜಪಾನ್‌ಗೆ ಹೋಗಲು ಅನುಮತಿ ನೀಡಬೇಕೆಂದು ಕೋರಿದ ಜಿಂದಾಲ್‌ ಅವರ ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಧೀಶ ಭರತ್‌ ಪರಾಶರ್‌ ಪುರಸ್ಕರಿಸಿದರು. 

ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎನ್‌ ಕೆ ಮತ್ತಾ ಮತ್ತು ನ್ಯಾಯವಾದಿ ಸಂವೇದನ ವರ್ಮಾ ಅವರು ಜಿಂದಾಲ್‌ ಅವರ ಅರ್ಜಿಯನ್ನು ವಿರೋಧಿಸಿದ ಕಾರಣಕ್ಕೆ ನ್ಯಾಯಾಲಯ ಜಿಂದಾಲ್‌ ಗೆ ಕೆಲವು ಶರತ್ತುಗಳನ್ನು ವಿಧಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next