Advertisement
ರವಿಶಾಸ್ತ್ರಿ ಅವರು ಕಳೆದ ಮಾರ್ಚ್ 1ರಂದು ಕಾರ್ಕಳ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸತತ ಏಳನೇ ವರ್ಷದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ “ಭಾರತೀಯ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸುವ ಯಾವುದೇ ಅವಕಾಶಗಳನ್ನು ನಾನು ಸ್ವೀಕರಿಸುತ್ತೇನೆ’ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ಈ ಅವಕಾಶ ಬರಬಹುದು ಎಂದು ನಿರೀಕ್ಷೆ ಅವರ ಮಾತಿನಲ್ಲಿತ್ತು.
ರವಿಶಾಸ್ತ್ರಿ ಅವರನ್ನು ಕ್ರಿಕೆಟ್ ಸಲಹಾ ಸಮಿತಿ ಸದಸ್ಯ ಸಚಿನ್ ತೆಂಡುಲ್ಕರ್ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಈ ಹಿಂದೆ ಅನಿಲ್ ಕುಂಬ್ಳೆ ಅವರು ಕೋಚ್ ಆಗಿ ಆಯ್ಕೆಯಾದಾಗಲೂ ಸಚಿನ್ ಬೆಂಬಲ ಶಾಸ್ತ್ರಿಗಿತ್ತು. ಆದರೆ, ಗಂಗೂಲಿ ಬೆಂಬಲ ನೀಡಿರಲಿಲ್ಲ. (2016ರಲ್ಲಿ ಕೋಚ್ ಆಗಿ ಆಯ್ಕೆಯಾದ ಕುಂಬ್ಳೆ ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರೂ- ಕೊಹ್ಲಿ ಸಹಿತ ಕೆಲವು ಆಟಗಾರರ ಮುನಿಸಿನಿಂದಾಗಿ ರಾಜೀನಾಮೆ ನೀಡಿದ ಪ್ರಸಂಗ ಸಂಭವಿಸಿತ್ತು.
Related Articles
Advertisement
ತಂಡದ ಹಿತ ಮುಖ್ಯಭಾರತೀಯ ತಂಡದ ಸಮಗ್ರ ಹಿತಾಸಕ್ತಿಯೇ ಮುಖ್ಯ ಎಂದಿರುವ ಶಾಸ್ತ್ರಿ ಅವರು 2019ರ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾವೇ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಗಳನ್ನು ಗಮನಿಸಿದರೆ; ಶಾಸ್ತ್ರಿ ಅವರು ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ. ಅವರ ಆಯ್ಕೆಯ ಹಾದಿ ವಸ್ತುಶಃ ಸುಗಮವಾಗಿದೆ. ಮನೋಹರ ಪ್ರಸಾದ್