Advertisement

ಬ್ಯಾಂಕ್‌ ಅಧಿಕಾರಿಗೆ ಸಿಎಂ ತರಾಟೆ

11:59 AM Aug 19, 2018 | |

ಬೆಂಗಳೂರು: “ಸರ್ಕಾರ ರೈತರ ಸಾಲ ಮನ್ನಾ ಮಾಡ್ತಿದ್ರೆ, ನೀವು ಅವರಿಗೆ ನೋಟಿಸ್‌ ಕೊಟ್ಟು ಕಿರುಕುಳ ಕೊಡ್ತೀರಾ’ ಹೀಗೆಂದು ಬ್ಯಾಂಕ್‌ ಅಧಿಕಾರಿ ಒಬ್ಬರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಶನಿವಾರ ನಡೆಯಿತು.

Advertisement

ದೇವನಹಳ್ಳಿ ತಾಲೂಕು ವಿಜಯಪುರದ ಆಕ್ಸಿಸ್‌ ಬ್ಯಾಂಕ್‌ ಶಾಖೆ ಅಧಿಕಾರಿಗಳು ನೋಟಿಸ್‌ ನೀಡಿ ಕಿರುಕುಳ ಕೊಡುತ್ತಿದ್ದಾರೆ ಎಂದು ರೈತ ದೇವರಾಜ್‌ ಸಿಎಂಗೆ ದೂರಿದರು. ಇದಕ್ಕೆ ತಕ್ಷಣ ಬ್ಯಾಂಕಿನ ಅಧಿಕಾರಿ ವೆಂಕಟೇಶ್‌ರಿಗೆ ಕರೆ ಮಾಡಿದ ಸಿಎಂ, “ರೀ ವೆಂಕಟೇಶ್‌ ನಾನು ಕುಮಾರಸ್ವಾಮಿ ಮಾತಾಡ್ತಿದೀನಿ, ಸರ್ಕಾರ ರೈತರ ಸಾಲ ಮನ್ನಾ ಮಾಡ್ತಿದ್ರೆ, ನೀವು ಅವರಿಗೆ ನೋಟಿಸ್‌ ಕೊಟ್ಟು ಯಾಕೆ ಕಾಟ ಕೊಡ್ತೀದಿರಾ, ಯಾರು ನಿಮ್ಮ ಅಧ್ಯಕ್ಷರು, ಹೇಳಿ ಅವರಿಗೆ, ಇದೆಲ್ಲಾ ಮಾಡಬೇಡಿ ಅಂತ’ ಎಂದು ಗದರಿದರು.

“ಈಗಾಗಲೇ ಸಹಕಾರಿ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಬಗ್ಗೆ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಶೀಘ್ರವೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಬಗ್ಗೆಯೂ ಆದೇಶ ಹೊರಡಿಸುತ್ತೇವೆ. ರೈತರಿಗೆ ಈ ರೀತಿ ನೋಟಿಸ್‌ ಕೊಟ್ಟು ಅವರನ್ನು ಮಾನಸಿಕವಾಗಿ ಕುಗ್ಗಿಸಬೇಡಿ,’ ಎಂದು ಅಧಿಕಾರಿಗೆ  ಹೇಳಿದರು.

ಅಸಲಿಯತ್ತು ಬಿಚ್ಚಿಡುತ್ತೇನೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, “ರೈತರ ಸಾಲ ಮನ್ನಾದ ಮೊತ್ತ 28 ಸಾವಿರ ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕೆ ಅಡ್ಡಗಾಲು ಹಾಕಲು ಬಿಜೆಪಿಯವರು ದೆಹಲಿಯಲ್ಲಿ ಇನ್ನಿಲ್ಲಿದ ಕಸರತ್ತು ನಡೆಸುತ್ತಿದ್ದಾರೆ. ಇದನ್ನು ನಾನು ಸವಾಲಾಗಿ ಸ್ವೀಕರಿಸಿದ್ದು, ಸೂಕ್ತ ಸಮಯದಲ್ಲಿ ಬಿಜೆಪಿಯ ಅಸಲಿಯತ್ತು ಬಿಚ್ಚಿಡುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next