Advertisement

ಕರ್ನಾಟಕವನ್ನು ‘ಜಂಗಲ್ ರಾಜ್ಯ’ಮಾಡುತ್ತಿರುವ ಸಿಎಂ ಯಡಿಯೂರಪ್ಪ: ತಂಗಡಗಿ

06:34 PM Oct 30, 2020 | Mithun PG |

ಗಂಗಾವತಿ: ಬಿಜೆಪಿ ಸರಕಾರ ಸಂವಿಧಾನದ ವಿರೋಧಿಯಾಗಿದೆ. ಕರ್ನಾಟಕವನ್ನು ಸಿಎಂ ಯಡಿಯೂರಪ್ಪ ಜಂಗಲ್ ರಾಜ್ಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಸಚಿವ ಶಿವರಾಜ ಎಸ್ ತಂಗಡಗಿ ಆರೋಪಿಸಿದ್ದಾರೆ.

Advertisement

ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಗಂಗಾವತಿ, ಕನಕಗಿರಿ,ಕುಷ್ಟಗಿ, ಯಲಬುರ್ಗಾ, ಕುಕನೂರು ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ನಿಂದ ಗೆದ್ದ ಸದಸ್ಯರನ್ನು ಅಪಹರಣ ಮಾಡಿ ಥಳಿಸಿ ಕೊಲೆ ಬೆದರಿಕೆಯನ್ನು ಹಾಕಲಾಗುತ್ತದೆ. ಪೊಲೀಸರ ಕೇಸ್ ದಾಖಲಿಸದಂತೆ ಗೃಹ‌ಸಚಿವ ಬಸವರಾಜ ಬೊಮ್ಮಾಯಿ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ.

ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ಹಿರೇಮಠ ಅವರನ್ನು ಬಿಜೆಪಿ ನಗರಸಭೆ ಸದಸ್ಯರು, ಶಾಸಕರ ಕುಮ್ಮಕ್ಕಿನಿಂದ ಅಪಹರಣ ಮಾಡಿದ್ದಾರೆ. ಹಳಿಯಾಳದಲ್ಲಿ ಹಿರೇಮಠ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಾರೆ. ನ.02ರಂದು ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಗಲಾಟೆ ಮಾಡಿಸಲು ಬಿಜೆಪಿ ಶಾಸಕರು ಷಡ್ಯಂತ್ರ ನಡೆಸಿದ್ದು ಜಿಲ್ಲಾ ಪೊಲೀಸ್ ಅಧಿಕಾರಿ ಸೂಕ್ತ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಶಾಮೀದ್ ಮನಿಯರ್ ಹಾಜರಿದ್ದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next