Advertisement

ಸಿಎಂ ಪ್ರೀತಿ ಪಾತ್ರರೇ ಶರತ್‌ ಮಡಿವಾಳ ಹತ್ಯೆ ಮಾಡಿದ್ದಾರೆ!: ಸಿಂಹ 

09:46 AM Jul 13, 2017 | Team Udayavani |

ಮೈಸೂರು: ಬಿ.ಸಿ.ರೋಡ್‌ನ‌ಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರೀತಿ ಪಾತ್ರರೇ ಹತ್ಯೆ ಮಾಡಿದ್ದಾರೆ ಎಂದು ಮೈಸೂರು -ಕೊಡಗು ಸಂಸದ, ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರತಾಪ್‌ ಸಿಂಹ ಗಂಭೀರ ಆರೋಪ ಮಾಡಿದ್ದಾರೆ.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು. ಮುಖ್ಯಮಂತ್ರಿಗಳೇ ದೇಶಕ್ಕೆ ಮೈಸೂರು ಮಹಾರಾಜರು ಶ್ರೇಷ್ಠ ಆಡಳಿತ ನೀಡಿದಂತಹ ಜಾಗದಿಂದ ಬಂದ ನೀವು ಆಡಳಿತದ ಕೊನೆಯ ಹತ್ತು ತಿಂಗಳಾದರೂ ರಾಜ್ಯದ ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿ ,ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡಿ ಎಂದರು.

ಮುಖ್ಯಮಂತ್ರಿಗಳೆ ನಿಮ್ಮ ಬಾಯಲ್ಲಿ ಹಿಂದೂ ಎಂಬ ಪದ ಸಲೀಸಾಗಿ ಬರುತ್ತದೆ, ಆದರೆ ಮುಸ್ಲಿಂ ಎಂಬ ಪದ ಬರುವುದಿಲ್ಲ ಯಾಕೆ ? ವೋಟ್‌ ಬ್ಯಾಂಕ್‌ ತಪ್ಪಿ ಹೋಗುವ ಆತಂಕವೆ ಎಂದು ಪ್ರಶ್ನಿಸಿದರು.

ಕೊಲೆಗಡುಕರ ಪರ ನಿಂತು ಬಿಜೆಪಿಯವರ ಪರ ಆರೋಪ ಮಾಡುತ್ತೀರಲ್ಲಾ ಇದೆಂಥಾ ರಾಜನೀತಿ. ಕೊಲೆಗಾರರ ವಿರುದ್ಧ ಪ್ರೀತಿ ತೋರಿದರೆ ಶಾಂತಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next