Advertisement

ಪಿಂಚಣಿ ದುರ್ಬಳಕೆ ತಡೆಗೆ ಸಿಎಂ ಕಟ್ಟಪ್ಪಣೆ

01:05 AM Jan 21, 2021 | Team Udayavani |

ಬೆಂಗಳೂರು: ಸಾಮಾಜಿಕ ಭದ್ರತೆ ಯೋಜನೆಯಡಿ ಪಿಂಚಣಿ ಪಡೆಯುವವರ ಪೈಕಿ ಶೇ. 20ರಷ್ಟು ನಕಲಿ ಫ‌ಲಾನುಭವಿಗಳಿದ್ದು, ತಿಂಗಳೊಳಗೆ ಅವರನ್ನು ಪತ್ತೆಹಚ್ಚಿ ನಷ್ಟ ತಪ್ಪಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಎಲ್ಲ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Advertisement

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲ ಜಿಲ್ಲಾಧಿ ಕಾರಿಗಳು, ಸಿಇಒಗಳೊಂದಿಗೆ ಸುದೀರ್ಘ‌ ಕಾಲ ಸಭೆ ನಡೆಸಿದ ಸಿಎಂ ಬಿಎಸ್‌ವೈ ಮುಂದಿನ ಕಾರ್ಯಯೋಜನೆಗಳ ಜಾರಿ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.

ಶೇ. 20ರಷ್ಟು ನಕಲಿ ಪಿಂಚಣಿದಾರರು :

ಸಾಮಾಜಿಕ ಭದ್ರತೆ ಯೋಜನೆಗಳಡಿ 67 ಲಕ್ಷ ಮಂದಿಗೆ ಪಿಂಚಣಿಯಾಗಿ ವಾರ್ಷಿಕ 7,500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಶೇ. 20ರಷ್ಟು ಮಂದಿ ನಕಲಿ ಪಿಂಚಣಿದಾರರಿರುವ ಅಂದಾಜಿದೆ. ಮೃತಪಟ್ಟವರಿಗೂ ಪಿಂಚಣಿ ಪಾವತಿಯಾಗುತ್ತಿದೆ. ಪ್ರತೀ ಫ‌ಲಾನುಭವಿಯ ಮನೆ ಸರ್ವೇ ನಡೆಸಿ ನಕಲಿ ಫ‌ಲಾನುಭವಿಗಳನ್ನು ಪತ್ತೆ ಹಚ್ಚಿ ಹಣ ದುರ್ಬಳಕೆಯಾಗದಂತೆ ಬಿಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next