Advertisement

CM Siddaramaiah; ಇನ್ನೂ 25 ವರ್ಷ ಬದುಕುತ್ತೀನಿ.. ಶತಾಯುಷಿಯಾಗುವ ಆಸೆ

10:32 PM Dec 23, 2023 | Team Udayavani |

ಮೈಸೂರು:ನೂರು ವರ್ಷಕ್ಕಿಂತ‌ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಶನಿವಾರ ಹೇಳಿಕೆ ನೀಡಿದ್ದಾರೆ.

Advertisement

ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಮಾತನಾಡಿ,ಕಾರ್ಯಕ್ರಮವನ್ನ ನಾನೇ ಉದ್ಘಾಟನೆ ಮಾಡಿದ್ದೀನಿ.ರಜತ ಮಹೋತ್ಸವವನ್ನೂ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ.ಸುವರ್ಣ ಮಹೋತ್ಸವವನ್ನೂ ನಾನೇ ಮಾಡಬೇಕು ಅಂದುಕೊಂಡಿದ್ದೇನೆ.ನೂರು ವರ್ಷಕ್ಕಿಂತ‌ ಹೆಚ್ಚು ಬದುಕಬೇಕು ಅಂದುಕೊಂಡಿದ್ದೇನೆ.ಏಯ್, ಬಸವೇಗೌಡ ಇನ್ನೂ 25 ವರ್ಷ ಬದುಕುತ್ತೀನಿ ಎಂದು ಶತಾಯುಷಿಯಾಗಿ ಬದುಕುವ ಆಸೆಯನ್ನು ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದರು.

”ಮೈಸೂರಿನಲ್ಲಿ ಫಿಲ್ಮ್ ಸಿಟಿ ಮಾಡ್ತೀನಿ ಎಂದು ಬಜೆಟ್ ನಲ್ಲೇ ಹೇಳಿದ್ದೇನೆ. ಮೈಸೂರಿನಲ್ಲೇ ಫಿಲ್ಮ್ ಸಿಟಿ ಮಾಡುತ್ತೇವೆ.ಹೊರಗಡೆ ಎಲ್ಲೂ ಮಾಡಲ್ಲ” ಎಂದರು.

”ನಾನು ಹಿಂದೆಯೇ ಚಾಮುಂಡಿ ಬೆಟ್ಟ ರೋಪ್ ವೇ ಮಾಡೋಣ ಅಂತ ಹೇಳಿದ್ದೆ.ಆದರೆ ಪರಿಸರ ವಾದಿಗಳು ಬಿಡಲಿಲ್ಲ.ರೋಪ್ ವೇ ಮಾಡಲು ನಾನು ಈಗಲೂ ಸಿದ್ಧ.ಆದರೆ ಯಾರೂ ತಡೆಯಬಾದರು” ಎಂದರು.

”ಏ ವತ್ಸ, ಬೆಂಗಳೂರು ಮೈಸೂರು ಹೈವೇ ಮಾಡಿದ್ದು ನಾವೇ, ನಾನು, ಮಹದೇವಪ್ಪ ಮಾಡಿದ್ದು.ನಿಮ್ಮ ಎಂಪಿ ಬುರುಡೆ ಹೊಡೆಯುತ್ತಾನೆ. ಅವನ ಕ್ಷೇತ್ರ ಇರೋದು ಸಿದ್ದಲಿಂಗಪುರದ ವರೆಗೆ, ಅಲ್ಲಿಂದ ಆಚೆ ಇರೋದು ಯಾರು? ನಾನು ಬೆನ್ನು ತಟ್ಟಿಕೊಳ್ತಾ ಇಲ್ಲ” ಎಂದರು.

Advertisement

”ನಾನು ಹೋದ ಮೇಲೆ ಮೈಸೂರು ಅಭಿವೃದ್ಧಿ ಆಗಿಲ್ಲ.ಮತ್ತೆ ಬಂದಿದ್ದೇನೆ ನಾನು ಮೈಸೂರು ಅಭಿವೃದ್ಧಿ ಮಾಡೇ ಮಾಡುತ್ತೇವೆ. ಅದು ನನ್ನ ಜವಾಬ್ದಾರಿ.ಯಾರು ಏನೇ ವಿರೋಧ ಮಾಡಿದರೂ ನಾವು ಹೇಳಿದಂತೆ ಮಾಡುತ್ತೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next