Advertisement

ಸಿಎಂ ಸಿದ್ದರಾಮಯ್ಯ ಸಮಾಜ ಒಡೆಯುವ ವ್ಯಾಘ್ರ: ವರ್ತೂರು

08:43 AM Jan 01, 2018 | Team Udayavani |

ಬಾಗಲಕೋಟೆ: ಅಣ್ಣ- ತಮ್ಮಂದಿರಂತೆ ಇದ್ದ ವೀರಶೈವ-ಲಿಂಗಾಯತ ಸಮಾಜವನ್ನು ಒಡೆದವರು ಸಿಎಂ ಸಿದ್ದರಾಮಯ್ಯ. ಅವರೊಬ್ಬ
ಸಮಾಜ ಒಡೆಯುವ ವ್ಯಾಘ್ರ ಎಂದು ನಮ್ಮ ಕಾಂಗ್ರೆಸ್‌ ಪಕ್ಷದ ಸಂಸ್ಥಾಪಕ ಅಧ್ಯಕ್ಷ, ಶಾಸಕ ವರ್ತೂರು ಪ್ರಕಾಶ ಆರೋಪಿಸಿದರು.

Advertisement

ಜಿಲ್ಲೆಯ ಕೂಡಲಸಂಗಮದಲ್ಲಿ ಭಾನುವಾರ “ನಮ್ಮ ಕಾಂಗ್ರೆಸ್‌’ ನೂತನ ಪಕ್ಷದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಬರಲು ಉತ್ತರ ಕರ್ನಾಟಕ ಕಾರಣ. ಅದರಲ್ಲೂ ಈ ಭಾಗದ ಅಹಿಂದ ವರ್ಗದವರು ಕಳೆದ ಬಾರಿ ಕಾಂಗ್ರೆಸ್‌ ಗೆ ದೊಡ್ಡ ಮಟ್ಟದಲ್ಲಿ ಬೆಂಬಲ ನೀಡಿದ್ದರು. ಈ ಅಹಿಂದ ವರ್ಗದಲ್ಲಿ ಕುರುಬ ಸಮಾಜದ ಪಾತ್ರ ದೊಡ್ಡದಿದೆ. ಕುರುಬ ಸಮಾಜ ಮತ್ತು ಅಹಿಂದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಅಹಿಂದ ವರ್ಗವನ್ನು ಸಂಪೂರ್ಣ ಮರೆತು
ಮೇಲ್ವರ್ಗದವರಿಗೆ ಮಣೆ ಹಾಕುತ್ತಿದ್ದಾರೆ. ಅವರ ಆಟ ಇನ್ನು ಕೇವಲ ಮೂರು ತಿಂಗಳು ಮಾತ್ರ ನಡೆಯಲಿದೆ ಎಂದರು.

ಸಿದ್ದರಾಮಯ್ಯ ಅವರು ತಮ್ಮ ಮಗನಿಗೆ ಚುನಾವಣೆ ಅಖಾಡ ಸಿದ್ಧ ಮಾಡುತ್ತಿದ್ದಾರೆ. ಕುರುಬ ಸಮಾಜದವರ ಋಣ ತೀರಿಸಲೂ
ಅವರಿಗೆ ಆಗಿಲ್ಲ. ನಾಲ್ಕೂವರೆ ವರ್ಷಗಳ ಬಳಿಕ ಕುರುಬ ಸಮಾಜದವರಿಗೆ ಒಂದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಇದು ಅಹಿಂದ ತತ್ವನಾ? ಎಚ್‌.ವಿಶ್ವನಾಥ, ಸತೀಶ ಜಾರಕಿಹೋಳಿ ಅವರಂಥವರನ್ನು ಕಡೆಗಣಿಸಿದ್ದಾರೆ. ಮೇಲ್ವರ್ಗದವರಿಗೆ ಮಣೆ ಹಾಕುವ
ಸಿದ್ದರಾಮಯ್ಯ ಅವರಿಗೆ ಮೇಲ್ವರ್ಗದವರು ಎಂದೂ ಕೈ ಹಿಡಿಯುವುದಿಲ್ಲ ಎಂದರು. ನಾನು ಬಿಜೆಪಿ ಏಜೆಂಟ್‌ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಅವರೇ ವೇದಿಕೆ ಸಿದ್ಧಪಡಿಸಿ, ನಾನು ಬಿಜೆಪಿ ಏಜೆಂಟ್‌ ಎಂಬುದನ್ನು ಸಾಬೀತುಪಡಿಸಿ. ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಜತೆ ಒಳಒಪ್ಪಂದ ಮಾಡಿಕೊಂಡಿದ್ದರು ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next