Advertisement

CM Siddaramaiah ಗೋರ್ಟಾ ಗ್ರಾಮಕ್ಕೆ ಭೇಟಿ ನೀಡಲು ಆಗ್ರಹ: ಶಾಸಕ ಪ್ರಭು ಚವ್ಹಾಣ್

04:59 PM Sep 17, 2024 | Team Udayavani |

ಔರಾದ: ಕಲಬುರಗಿಯಲ್ಲಿ ಸಚಿವ ಸಂಪುಟ ಮುಗಿದ ಬಳಿಕ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮಕ್ಕೆ ಭೇಟಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕೆಂದು ಶಾಸಕ ಪ್ರಭು ಚವ್ಹಾಣ್ ಆಗ್ರಹಿಸಿದ್ದಾರೆ.

Advertisement

ಮಿನಿ ವಿಧಾನಸೌಧ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾಗಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,ಕರ್ನಾಟಕದ ಜಲಿಯನ್ ವಾಲಾಬಾಗ್ ವೆಂದು ಜಿಲ್ಲೆಯ ಗೋರ್ಟಾ ಹತ್ಯಾ ಕಾಂಡವಾಗಿದೆ.ಬಸವ ಕಲ್ಯಾಣಕ್ಕೆ ಭೇಟಿ ನೀಡಲು ಮುಂದಾಗಬೇಕೆಂದು ಮನವಿ ಮಾಡಿದರು.

ರಜಾಕರ ಹಾವಳಿಯಿಂದ ಮುಕ್ತವಾದ ದಿನವಾಗಿದೆ.ಕಲಬುರಗಿ ಸಚಿವ ಸಂಪುಟ ನಡೆಸುತ್ತಿರುವುದು ಖುಷಿಯ ವಿಷಯವಾಗಿದೆ. ಅದರಂತೆ ತ್ಯಾಗ ಬಲಿದಾನ ಮತ್ತು ಐತಿಹಾಸಿಕ ವಲ್ಲಭಾಯಿ ಪಟೇಲ್ ಮೂರ್ತಿ ಸ್ಮಾರಕ ವೀಕ್ಷಣೆ ಮಾಡಲು ಮುಂದಾಗುವುದರ ಜೊತೆಗೆ ಪುಣ್ಯ ಭೂಮಿ ಮತ್ತಷ್ಟು ಅಭಿವೃದ್ಧಿ ಕೆಲಸ ಮಾಡಲು ಮುಂದಾಗಬೇಕೆಂದು ತಾಕೀತು ಮಾಡಿದರು.

ನನ್ನ ಕೊನೆಯ ಉಸಿರು ಇರುವ ತನಕ ತಾಲೂಕಿನ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ.ಹಿಂದೆ ಕದ್ದು ಮುಚ್ಚಿ ಆಟವಾಡುವ ಜನರು ಮಾನಸಿಕವಾಗಿ ಎಷ್ಟೇ ಹಿಂಸೆ ನೀಡಿದರು ನಾನು ಜನ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next