Advertisement

CM Siddaramaiah: ಹೆದರುವುದಿಲ್ಲ ,ತನಿಖೆ ಎದುರಿಸಲು ಸಿದ್ಧ

01:16 AM Sep 26, 2024 | Team Udayavani |

ಬೆಂಗಳೂರು: ನಾವು ತನಿಖೆಯನ್ನು ಎದುರಿಸಲು ಸಿದ್ಧರಿದ್ದೇವೆ. ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ. ಎಲ್ಲ ರೀತಿಗಳಲ್ಲಿ ಕಾನೂನು ಹೋರಾಟ ನಡೆಸಲು ತಯಾರಾಗಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.

Advertisement

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಅನ್ವಯ 17ಎ ಪ್ರಕಾರ ತನಿಖೆ ನಡೆಸಲು ಅನುಮತಿ ನೀಡಲಾಗಿದೆ. ಆದೇಶದ ಪ್ರತಿ ನನಗೆ ದೊರೆತಿಲ್ಲ. ಆದೇಶವನ್ನು ಪೂರ್ಣವಾಗಿ ಓದಿದ ಅನಂತರ ಪ್ರತಿಕ್ರಿಯೆ ನೀಡುವೆ ಎಂದರು.

ಹೈಕೋರ್ಟ್‌ ಆದೇಶದ ಬಳಿಕವೂ ಇದೇ ಮಾತು ಹೇಳಿದ್ದು, ಈಗಲೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ನನಗೆ ತಿಳಿದಂತೆ ಮೈಸೂರು ಲೋಕಾಯುಕ್ತಕ್ಕೆ ಪ್ರಕರಣವನ್ನು ಶಿಫಾರಸು ಮಾಡಲಾಗಿದೆ ಎಂದರು.

ಸಿಎಂ ಹೇಳಿದ್ದೇನು?
-ಆದೇಶ ಪ್ರತಿ ಓದಿದ ಬಳಿಕ ಸ್ಪಷ್ಟ ಪ್ರತಿಕ್ರಿಯೆ ನೀಡುವೆ
-ಮುಡಾ ಮೈಸೂರಿನಲ್ಲಿಇರುವುದರಿಂದ ಅಲ್ಲಿಯ ಲೋಕಾಗೆ ಶಿಫಾರಸು ಸಾಧ್ಯತೆ
-ಪೂರ್ಣ ಆದೇಶ ಸಿಕ್ಕಿದ ಬಳಿಕ ವಕೀಲರ ಜತೆ ಚರ್ಚೆ
-17ಎ ಪ್ರಕಾರ ತನಿಖೆ ಮಾಡಲು ಕೋರ್ಟ್‌ ಅನುಮತಿ ನೀಡಿದೆ

Advertisement

Udayavani is now on Telegram. Click here to join our channel and stay updated with the latest news.

Next