Advertisement

Karnataka ಸಿಎಂ ಸಿದ್ದರಾಮಯ್ಯ-ಎಂ.ಬಿ. ಪಾಟೀಲ್‌ ಭೇಟಿ

11:14 PM May 15, 2024 | Team Udayavani |

ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಸರಕಾರ ಬೀಳಲಿದೆ ಎಂಬ ವದಂತಿ ನಡುವೆ ಹಿರಿಯ ಸಚಿವ ಎಂ.ಬಿ. ಪಾಟೀಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಬುಧವಾರ ಭೇಟಿ ಮಾಡಿ ಚರ್ಚಿಸಿದರು.

Advertisement

ಇತ್ತೀಚಿನ ರಾಜಕೀಯ ವಿದ್ಯ ಮಾನಗಳು, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಗಳು, ಚುನಾವಣೆ ಮುಗಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್‌, ಮಹಾರಾಷ್ಟ್ರದಲ್ಲಿ 30ರಿಂದ 35 ಕ್ಷೇತ್ರಗಳನ್ನು ಗೆಲ್ಲಲಿದ್ದೇವೆ. ಅಲ್ಲಿನ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಈ ಹಿಂದೆ ಪಕ್ಷ ಬಿಟ್ಟು ಹೋಗಿದ್ದು, ಅವರು ಸಹಿತ ಎಲ್ಲರೂ ಉದ್ಧವ್‌ ಠಾಕ್ರೆ ಬಳಿಗೆ ಮರಳುತ್ತಾರೆ. ಚುನಾವಣೆ ಮುಗಿದು ಒಂದು ತಿಂಗಳ ಬಳಿಕ ಅಲ್ಲಿನ ಬಿಜೆಪಿ ಸರಕಾರ ಬೀಳಲಿದೆ. 30-40 ಶಾಸಕರು ನಮ್ಮ ಕಡೆ ಬರಲಿದ್ದಾರೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next