Advertisement

Chitradurga: ಕುರಿ ಕಾಯುತ್ತಿದ್ದ ಬಾಲಕನನ್ನು ಮತ್ತೆ ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ

11:39 AM Sep 12, 2023 | Team Udayavani |

ಚಿತ್ರದುರ್ಗ: ಶಾಲೆಗೆ ಹೋಗದೆ ಕುರಿ ಕಾಯುತ್ತಿದ್ದ ಬಾಲಕನನ್ನು ಸಿಎಂ ಸಿದ್ದರಾಮಯ್ಯ ಅವರು ಮತ್ತೆ ಶಾಲೆಗೆ ಸೇರಿಸಿದ ಪ್ರಸಂಗ ನಡೆದಿದೆ.

Advertisement

ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ 11 ವರ್ಷದ ಬಾಲಕ ಯೋಗೀಶ್ ಶಾಲೆ ಬಿಟ್ಟು ಕುರಿಕಾಯಲು ಹೋಗುತ್ತಿದ್ದ. ಇದನ್ನು ಕಂಡ ಗ್ರಾಮದ ಮಹೇಂದ್ರ ಎಂಬ ಯುವಕ ಸಿಎಂ ಎಕ್ಸ್ (ಟ್ಟಿಟ್ಟರ್) ಖಾತೆಗೆ ಟ್ಯಾಗ್ ಮಾಡಿ ಈ ವಿಚಾರ ತಿಳಿಸಿದ್ದ. ಸಿಎಂ ಕಾರ್ಯಾಲಯ ಕೇವಲ 23 ಗಂಟೆಯಲ್ಲಿ ಇದರ ಬಗ್ಗೆ ಕ್ರಮ ವಹಿಸಿ ಬಾಲಕ ಮರಳಿ ಶಾಲೆಗೆ ಸೇರುವಂತೆ ಮಾಡಿದೆ.

ಇದನ್ನೂ ಓದಿ:Asia Cup 2023; ಪಾಕ್ ಗೆ ಗಾಯಾಳುಗಳ ಚಿಂತೆ; ಇಬ್ಬರು ಹೊಸ ಬೌಲರ್ ಗಳು ತಂಡಕ್ಕೆ ಸೇರ್ಪಡೆ

ಕಳೆದ 2 ವರ್ಷದಿಂದ ಯೋಗೀಶ್ ಶಾಲೆಗೆ ಹೋಗದೆ ಕುರಿಕಾಯಲು ತೆರಳುತ್ತಿದ್ದ. ಕುರಿ ಕಾಯುತ್ತಿದ್ದ ಸ್ಥಳಕ್ಕೆ ತೆರಳಿದ್ದ ಶಿಕ್ಷಣ ಇಲಾಖೆ ಸಿಬ್ಬಂದಿಗಳು ಮತ್ತೆ ಶಾಲೆಗೆ ಕರೆ ತಂದಿದ್ದಾರೆ. ಈಗ ಬಾಲಕನಿಗೆ ಸರ್ಕಾರಿ ಬಸಾಪುರ ಗ್ರಾಮದ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next