Advertisement

ಸಿಎಂ ಸೀಟ್ ಈಸ್‌ ಫುಲ್

01:05 AM May 17, 2019 | Sriram |

ರಾಯಚೂರು: ‘ಸಿಎಂ ಸೀಟ್ ಈಸ್‌ ಫುಲ್. ಹೀಗಿದ್ದಾಗ ಬೇರೆಯವರು ಆ ಸ್ಥಾನಕ್ಕೆ ಅರ್ಹರು-ಅನರ್ಹರು ಎಂಬ ಚರ್ಚೆ ಅಪ್ರಸ್ತುತ’ ಎಂದು ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘2022ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯರನ್ನು ಸಿಎಂ ಮಾಡ್ತೀವಿ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಅವರು ಮುಂದೆ ಅಧಿಕಾರಕ್ಕೆ ಬಂದಲ್ಲಿ ಸಿಎಂ ಮಾಡಿಕೊಳ್ಳಲಿ, ಬೇಡ ಎಂದು ಹೇಳಿದವರಾರು? ಎಂದರು.

ರೇವಣ್ಣ ಅವರು ನಾನು ಸಿಎಂ ಆಗ್ತೀನಿ ಎಂದು ಎಲ್ಲಿಯಾದರೂ ಹೇಳಿದ್ದಾರಾ? ಯಾರೋ ದಾರೀಲಿ ಹೋಗುವವರು ಹೇಳಿದರೆ ಏನೂ ಮಾಡಲಾಗಲ್ಲ. ರೇವಣ್ಣನವರು ಸಿಎಂ ಸ್ಥಾನಕ್ಕೆ ಅರ್ಹರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಅರ್ಹರು ಎಂದ ಮಾತ್ರಕ್ಕೆ ನಾಳೆಯೇ ಸಿಎಂ ಸ್ಥಾನ ಬದಲಾಗುತ್ತದೆಯೇ ಎಂದು ಪ್ರಶ್ನಿಸಿದರು.

ಮಲ್ಲಿಕಾರ್ಜುನ ಖರ್ಗೆ ಅವರೂ ಸಿಎಂ ಹುದ್ದೆಗೆ ಅರ್ಹರು ಎಂದು ಹೇಳುತ್ತಿದ್ದೇವೆ. ಅದರಲ್ಲಿ ತಪ್ಪೇನು? ಹಾಗಂತ ಅವರನ್ನು ತುಳಿಯಲಾಗಿದೆ ಎಂದು ಹೇಳಿದಂತಲ್ಲ. ಅವರನ್ನು ತುಳಿದಿದ್ದಾರೆಯೋ, ಇಲ್ಲವೋ ಎಂಬುದನ್ನು ಆ ಪಕ್ಷದವರನ್ನು ಕೇಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next