Advertisement

Kolar ಭಾಗದವರಿಗೂ ಸಿಎಂ ಸ್ಥಾನ ಕೊಡಲಿ: ಕೊತ್ತೂರು ಮಂಜುನಾಥ್‌

11:17 PM Sep 10, 2024 | Team Udayavani |

ಕೋಲಾರ : ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಸದ್ಯಕ್ಕೆ ಖಾಲಿ ಇಲ್ಲ. ಬದಲಾವಣೆ ಪ್ರಶ್ನೆಯೂ ಇಲ್ಲ ಎಂದಿರುವ ಶಾಸಕ ಕೊತ್ತೂರು ಮಂಜುನಾಥ್‌, ಕೆಲವರು ಉತ್ತರ ಕರ್ನಾಟಕಕ್ಕೆ, ಬೆಳಗಾವಿ ಭಾಗದವರಿಗೆ ಸಿಎಂ ಸ್ಥಾನ ಕೇಳುತ್ತಿದ್ದಾರೆ. ಕೊಡುವುದಾದರೆ ಕೋಲಾರಕ್ಕೂ ಕೊಡಲಿ, ಬೆಂಗಳೂರಿಗೆ ಹತ್ತಿರವಾಗುತ್ತದೆ. ಮೊದಲ ಸಿಎಂ ಕೋಲಾರದವರೇ ಆಗಿರುವುದರಿಂದ ಕೇಳುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ಮುಂದೆ ಏಂದಾದರೂ ಸಿಗಬಹುದು ಎಂದು ಕೆಲವರು ಈಗಲೇ ಕಲ್ಲು ಎಸೆಯಲು ಹೊರಟಿರಬಹುದು. ಆಸೆಗಾಗಿ ಮಾತಾಡಿದ್ದಾರೆ. ಹಾಗೇನಾದರೂ ಇದ್ದಲ್ಲಿ ನನ್ನಲ್ಲಿ ಯಾರಾದರೂ ಬೆಂಬಲ ಕೋರುತ್ತಿದ್ದರು. ಇದುವರೆಗೂ ಅಂತಹ ಪ್ರಸ್ತಾವ ನಮ್ಮ ಮುಂದೆ ಇಲ್ಲ ಎಂದರು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸಲಿದ್ದಾರೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳುವ ಆವಶ್ಯಕತೆ ಇಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next