Advertisement

ಆಪರೇಷನ್‌ ಕಮಲ ಹೆಸರಲ್ಲಿ ಸಿಎಂ ರಾಜಕೀಯ

12:40 AM Jan 28, 2019 | Team Udayavani |

ಕಲಬುರಗಿ: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವು ದಾಗಲಿ ಅಥವಾ ಆಪರೇಷನ್‌ ಕಮಲವಾಗಲಿ ಬಿಜೆಪಿ ಮಾಡುತ್ತಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲಾಗುತ್ತಿದೆ ಎಂದು ಹೇಳುವ ಮೂಲಕ ರಾಜಕೀಯ ತಂತ್ರ ನಡೆಸಿ ನಮಗೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ಬಿಜೆಪಿ ಶಾಸಕ ಶ್ರೀರಾಮುಲು ಹೇಳಿದರು.

Advertisement

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಯಾವುದೇ ಆಪರೇಷನ್‌ ಮಾಡುತ್ತಿಲ್ಲ. ಸರ್ಕಾರದಲ್ಲಿರುವ ಶಾಸಕರೇ ಅಸಮಾಧಾನಗೊಂಡು ಮುಂಬೈಗೆ ಹೋಗಿದ್ದರು. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಅಶ್ವತ್ಥ ನಾರಾಯಣ ಕಾಂಗ್ರೆಸ್‌ ಶಾಸಕರೊಂದಿಗೆ ಕಾಣಿಸಿಕೊಂಡಿದ್ದು ಆಪರೇಷನ್‌ ಕಮಲ ವಿಚಾರಕ್ಕಲ್ಲ. ಕುರ್ಚಿಗೆ ಅಂಟಿಕೊಳ್ಳ ಬೇಕು ಅನ್ನೋರು ನಾವಲ್ಲ, ಸರ್ಕಾರ ಬಿದ್ದರೆ ನಾವು ಸರ್ಕಾರ ರಚಿಸಲು ಹಿಂದೇಟು ಹಾಕಲ್ಲ. ರೆಸಾರ್ಟ್‌ನಲ್ಲಿ ಕಾಂಗ್ರೆಸ್‌ನ ಬಳ್ಳಾರಿ ಶಾಸಕರು ಹೊಡೆದಾಡಿಕೊಂಡಿರು ವುದು ಸರಿಯಲ್ಲ. ಬಿಜೆಪಿ ಕೇಂದ್ರ ನಾಯಕರೇ ನೇರವಾಗಿ ಶಾಸಕರನ್ನು ಸೆಳೆಯುತ್ತಿದ್ದಾರೆಂಬ ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪದಲ್ಲಿ ಹುರುಳಿಲ್ಲ. ಅಂತಹ ಯಾವುದೇ ಯತ್ನಗಳು ನಡೆಯುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next