Advertisement

ಭಾರತದ ವಿದೇಶಾಂಗ ಸಚಿವ ಜೈಶಂಕರ್‌ ಕೇರಳ ಪ್ರವಾಸ: ಸಿಎಂ ಪಿಣರಾಯಿ ಟೀಕೆ

07:33 PM Jul 12, 2022 | Team Udayavani |

ತಿರುವನಂತಪುರಂ: ಭಾರತದ ವಿದೇಶಾಂಗ ಸಚಿವರಾಗಿರುವ ಎಸ್‌.ಜೈಶಂಕರ್‌ ಅವರು ಮಂಗಳವಾರದಂದು ಕೇರಳದ ಮೂರು ದಿನಗಳ ಪ್ರವಾಸವನ್ನು ಪೂರ್ಣಗೊಳಿಸಿದ್ದಾರೆ.

Advertisement

ರಾಜ್ಯದಲ್ಲಿರುವ ಪಕ್ಷದ ನಾಯಕರನ್ನು ಭೇಟಿ ಮಾಡಿ, ಚರ್ಚೆ ನಡೆಸುವುದು ಸೇರಿ ಅನೇಕ ಉದ್ದೇಶವನ್ನಿಟ್ಟು ಕೊಂಡು ಕೇರಳ ಪ್ರವಾಸ ಮಾಡಿದ್ದಾಗಿ ಅವರು ಹೇಳಿದ್ದಾರೆ. ಆದರೆ ಈ ಬಗ್ಗೆ ಮಾತನಾಡಿರುವ ಸಿಎಂ ಪಿಣರಾಯಿ ವಿಜಯನ್‌, “ಇದು ಚುನಾವಣಾ ಉದ್ದೇಶದಿಂದಲೇ ಮಾಡಿರುವ ಪ್ರವಾಸ’ ಎಂದಿದ್ದಾರೆ.

ಕಜಕುಟ್ಟಂನಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್‌ ಅನ್ನು ವೀಕ್ಷಿಸಿದ ಜೈಶಂಕರ್‌ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ವಿದೇಶಾಂಗ ವ್ಯವಹಾರಗಳನ್ನು ಗಮನಿಸುವವರಿಗೆ ಫ್ಲೈಓವರ್‌ ವೀಕ್ಷಣೆಯ ಅಗತ್ಯವೇನಿತ್ತು. ಇದು ಚುನಾವಣೆ ಹಿನ್ನೆಲೆ ಜನರನ್ನು ಸೆಳೆಯುವ ತಂತ್ರವನ್ನು ತೋರಿಸುತ್ತದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next