Advertisement

ಕಬ್ಬು ಬೆಳೆಗಾರರೊಂದಿಗೆ ಸಿಎಂ ಸಭೆ ; ಸರ್ಕಾರದಲ್ಲಿನ ಮಾಲೀಕರೇ ಗೈರು !

02:50 PM Nov 20, 2018 | Team Udayavani |

ಬೆಂಗಳೂರು: ಕಬ್ಬು ಬೆಳೆಗಾರರೊಂದಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಮಧ್ಯಾಹ್ನ ಮಹತ್ವದ ಸಭೆ ನಡೆಸುತ್ತಿದ್ದಾರೆ. ಸಭೆಗೆ ಸರ್ಕಾರದಲ್ಲಿರುವ ಕಬ್ಬಿನ ಕಾರ್ಖಾನೆಯ ಮಾಲೀಕರೇ ಗೈರಾಗಿದ್ದಾರೆ. 

Advertisement

ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್‌ , ಚಿಕ್ಕೋಡಿ ಸಂಸದ ಪ್ರಕಾಶ್‌ ಹುಕ್ಕೇರಿ , ಬೆಳಗಾವಿ, ಅಥಣಿ, ಬಾಗಲಕೋಟೆ ಭಾಗದ ಕಬ್ಬು ಬೆಳಗಾರರು, ಬೆಳಗಾವಿ ಭಾಗದ ಶಾಸಕರು ಹಾಜರಾಗಿದ್ದಾರೆ. 

ಸಭೆಗೆ ಸಕ್ಕರೆ ಕಾರ್ಖಾನೆ ಮಾಲೀಕರಾದ  ಬೆಳಗಾವಿ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ, ಶಾಸಕಿ ಲಕ್ಷ್ಮೀ ಹೆಬ್‌ಬಾಳ್‌ಕರ್‌, ಬಿಜೆಪಿಯ ಉಮೇಶ್‌ ಕತ್ತಿ ಸೇರಿದಂತೆ ಹಲವು  ಸಕ್ಕರೆ ಕಾರ್ಖಾನೆ ಮಾಲೀಕ ಜನಪ್ರತಿನಿಧಿಗಳು ಗೈರಾಗಿದ್ದಾರೆ. 

ಪ್ರತ್ಯೇಕ ಸಭೆ 
ಸಕ್ಕರೆ ಸಚಿವ ಕೆ.ಜೆ.ಜಾರ್ಜ್‌ ಮತ್ತು ಅಧಿಕಾರಿಗಳೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ವಿವರಗಳನ್ನು ಪಡೆದಿದ್ದಾರೆ. 

ಸುಳ್ಳು ಮಾಹಿತಿ ನೀಡಲಾಗಿದೆ 
ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಮತ್ತು ರೈತರಿಗೆ ವಂಚಿಸುತ್ತಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

Advertisement

38 ಕೋಟಿ ರೂಪಾಯಿ ಮಾತ್ರ ಬಾಕಿ ?
ಕಬ್ಬಿನ ಕಾರ್ಖಾನೆಗಳು ಒಟ್ಟು ರೈತರಿಗೆ 38 ಕೋಟಿ ರೂಪಾಯಿ ಹಣ ಬಾಕಿ ನೀಡಲು ಇದೆ ಎಂದು ಸರ್ಕಾರ ಹೇಳಿದರೆ, 100 ಕೋಟಿಗೂ ಹೆಚ್ಚು ಹಣ ನೀಡಲು ಬಾಕಿ ಇದೆ ಎಂದು ರೈತ ಮುಖಂಡರು ಆಕ್ರೋಶ ಹೊರ ಹಾಕಿದ್ದಾರೆ. 

ಕಬ್ಬು ಬೆಳೆಗಾರರ ಬಾಕಿ ಹಣ ಪಾವತಿ, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿ, ರೈತರ ಸಂಪೂರ್ಣ ಸಾಲ ಸೇರಿ ಸುಮಾರು 30 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಹೋರಾಟ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next