Advertisement

Karnataka Polls: ಸಂಸದ ಸಂಗಣ್ಣ ಕರಡಿ ಮನವೊಲಿಕೆಗೆ ಸಿಎಂ, ಬಿಎಸ್ವೈ, ಕಟೀಲ್ ಯತ್ನ

01:37 PM Apr 16, 2023 | Team Udayavani |

ಕೊಪ್ಪಳ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಸಂಸದ ಸಂಗಣ್ಣ ಕರಡಿ ಅವರು ಇದೀಗ ಟಿಕೆಟ್ ಸಿಗದ ನಿರಾಶೆಯಿಂದ ಪಕ್ಷ ತೊರೆಯಲು ಮುಂದಾಗಿದ್ದು, ಅವರನ್ನು ಪಕ್ಷದಲ್ಲಿ ಉಳಿಸಲು ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಂದಾಗಿದ್ದಾರೆ.

Advertisement

ಬಿಜೆಪಿಯಿಂದ ಟಿಕೆಟ್ ಸಿಗುವುದು ಕಷ್ಟ ಎಂದರಿತ ಸಂಸದ ಸಂಗಣ್ಣ ಕರಡಿ ಅವರು ಬೆಂಬಲಿಗರ ಸಭೆ ಕರೆದಿದ್ದಾರೆ. ಈ ವೇಳೆ ಬಿಜೆಪಿ ನಾಯಕರಿಂದ ನಿರಂತರ ಫೋನ್ ಕರೆ ಬಂದಿದೆ. ಮೊದಲು ಕರೆ ಮಾಡಿದ ಬಿಎಸ್ ವೈ ಅವರು ಸಂಸದರಿಗೆ ಮನವೊಲಿಕೆಗೆ ಯತ್ನ ನಡೆಸಿದ್ದು, ನಂತರ ಸಿಎಂ ಸೇರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ್ ಕರೆ ಮಾಡಿ ಯತ್ನಿಸಿದ್ದರು.

ಬೆಂಬಲಿಗರ ಸಭೆಯಲ್ಲಿಯೇ ಪ್ರತ್ಯೇಕ ಕೊಠಡಿಗೆ ತೆರಳಿ ಸಂಸದ ಕರಡಿ ವರಿಷ್ಠರ ಜೊತೆ ಪೋನ್ ನಲ್ಲಿ ಮಾತನಾಡಿದರು. ಈ ವೇಳೆ ಬಿಜೆಪಿ ವರಿಷ್ಠರ ಜೊತೆ ಇನ್ನು ಮಾತನಾಡಬೇಡಿ ಎಂದಬ ಕರಡಿ ಬೆಂಬಲಿಗರು ಹೇಳಿದ್ದಾರೆ. ರಾಜ್ಯ ನಾಯಕರ ಪೋನ್ ಕರೆ ಮಧ್ಯೆಯೂ ಬೆಂಬಲಿಗರ ಸಭೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next