Advertisement

ಸಿದ್ದರಾಮಯ್ಯಗೆ ”ಅಪ್ಪನ ಆಣೆ..”ಹೇಳಿಕೆ ನೆನಪಿಸಿ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ

01:54 PM Mar 11, 2022 | Team Udayavani |

ವಿಧಾನಸಭೆ : ಸಿದ್ದರಾಮಯ್ಯ ಏನು ಹೇಳುತ್ತಾರೋ, ಅದಕ್ಕೆ ವಿರುದ್ಧವಾದದ್ದೇ ನಡೆಯುತ್ತದೆ. ಕುಮಾರಸ್ವಾಮಿ, ಯಡಿಯೂರಪ್ಪ ಅವರ ಅಪ್ಪನ ಆಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದರು ಆದರೆ ಆಗಿಲ್ಲವೇ ? ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

Advertisement

ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ” ಹವಾ ತುಂಬಿದ ಪುಗ್ಗಾ ” ರೀತಿ ಆಡುತ್ತಿದ್ದಾರೆ. ಅವರು ವಾಸ್ತವ ಮರೆತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

ಪ್ರಜಾಪ್ರಭುತ್ವ ಬಂದು 75 ವರ್ಷದಲ್ಲಿ ದೇಶದ ಜನತೆ ಎಲ್ಲಾ ರಾಜಕೀಯ ಪಕ್ಷಗಳ ಆಟವನ್ನು ನೋಡಿದ್ದಾರೆ. ಜನರ ನಾಡಿ ಮಿಡಿತ ಗೊತ್ತಾಗೋದು ಚುನಾವಣೆ ಬಂದಾಗ.ಎಂಥ ಎಂಥ ನಾಯಕರೇ ಸೋತಿರುವುದು ಗೊತ್ತಲ್ಲವೇ ? ಎಂದು ವ್ಯಂಗ್ಯವಾಡಿದರು.

ಯಡಿಯೂರಪ್ಪ, ಕುಮಾರಸ್ವಾಮಿ ಅವರ ಅಪ್ಪನ ಆಣೆ ಸಿಎಂ ಆಗಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು ಆದ್ರೆ ಇಬ್ಬರೂ ಸಿಎಂ ಆದರು.ಅಧಿಕಾರದಲ್ಲಿ ಇದ್ದ‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದಯ ಕಷ್ಟ .ಜನರು ಬಹಳ ವೇಗವಾಗಿ ನಿರೀಕ್ಷೆ ಬದಲಾವಣೆ ಮಾಡುತ್ತಾರೆ.

ಅಧಿಕಾರದಲ್ಲಿ ಇದ್ದಿದ್ದಕ್ಕೆ ಬಿಜೆಪಿ ಗೆದ್ದರು ಎನ್ನುತ್ತೀರಲ್ಲ, ಹಾಗಾದರೆ ಯಾಕೆ ನೀವು ಪಂಜಾಬ್ ನಲ್ಲಿ ಏಕೆ ಗೆದ್ದಿಲ್ಲ ಎಂದು ಪ್ರಶ್ನಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next