Advertisement

ಸಿಎಂ ಆಗಮನ: ಮರಗಳ  ಕೊಂಬೆಗೆ ಕೊಡಲಿ

02:10 PM Jul 19, 2018 | Team Udayavani |

ಮಡಿಕೇರಿ: ಕೊಡಗು ಜಿಲ್ಲೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸುತ್ತಿರುವ ಕಾರಣಕ್ಕೆ ರಸ್ತೆ ಬದಿಯ ಮರಗಳ ಕೊಂಬೆಗಳಿಗೆ ಕೊಡಲಿ ಏಟು ಬಿದ್ದಿದೆ!

Advertisement

ಮರಗಳ ಕೊಂಬೆಗಳು ಅಪಾಯ ತಂದೊಡ್ಡಬಹುದು ಎಂಬ ಕಾರಣಕ್ಕೆ ಕಡಿಯುವ ಕಾರ್ಯ ನಡೆದಿದೆ.  ಕಳೆದ ಎರಡು ವಾರಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು ಅನೇಕ ಮರಗಳು ಧರಾಶಾಯಿಯಾಗಿದ್ದವು. ಗಾಳಿ, ಮಳೆ ಕಡಿಮೆಯಾಗಿದ್ದರೂ ಯಾವುದೇ ಅಪಾಯಗಳು ಸಂಭವಿಸಬಾರದು ಎನ್ನುವ ಕಾರಣದಿಂದ ರಸ್ತೆ ಬದಿ ಅಪಾಯಕಾರಿ ಎಂದೆನಿಸಿದ ಮರಗಳ ರೆಂಬೆಗಳನ್ನು ಅರಣ್ಯ ಇಲಾಖೆ ಸಿಬಂದಿ ಕತ್ತರಿಸುತ್ತಿದ್ದಾರೆ. ಈ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದು, ಬೆಲೆ ಬಾಳುವ ಮರಗಳಿಗೆ ಕೊಡಲಿ ಏಟು ಹಾಕಲಾಗುತ್ತದೆ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next