Advertisement

ಕೈ ಶಾಸಕಾಂಗ ಪಕ್ಷದ ಸಭೆ:ಜಾರಕಿಹೊಳಿ ಬ್ರದರ್ಸ್‌ ಸೇರಿ ಹಲವರು ಗೈರು!

10:44 AM Dec 18, 2018 | |

ಬೆಳಗಾವಿ: ಬಹುನಿರೀಕ್ಷಿತ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಮಂಗಳವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದ್ದು  ಕೆಲ ಶಾಸಕರು ಗೈರಾಗಿರುವ ಕುರಿತು ವರದಿಗಳು ಲಭ್ಯವಾಗಿವೆ. 

Advertisement

ಸಿಎಲ್‌ಪಿ ಸಭೆಗೆ ಸಚಿವ ರಮೇಶ್‌ ಜಾರಕಿಹೊಳಿ ,ಶಾಸಕರಾದ ಸತೀಶ್‌ ಜಾರಕಿಹೋಳಿ, ರಾಮಲಿಂಗಾ ರೆಡ್ಡಿ, ರೋಷನ್‌ ಬೇಗ್‌,ಎಂ.ಬಿ.ಪಾಟೀಲ್‌, ನಾಗೇಂದ್ರ  ಸೇರಿದಂತೆ ಹಲವರು ಗೈರಾಗಿದ್ದಾರೆ ಎಂದು ವಿವರಗಳು ಲಭ್ಯವಾಗಿವೆ.

ಗೈರಾಗಿರುವವರು ಅಸಮಾಧಾನದಿಂದಲೇ ಗೈರಾಗಿದ್ದಾರೋ ಇಲ್ಲ  ಕ್ಷೇತ್ರಗಳಲ್ಲಿನ ಕೆಲಸಗಳು ಮತ್ತು ವೈಯಕ್ತಿಕ ಕಾರಣಕ್ಕಾಗಿ ಗೈರಾಗಿದ್ದಾರೋ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.  

ಈಗಾಗಲೇ ಉತ್ತರ ಕರ್ನಾಟಕ ಭಾಗದ ಶಾಸಕರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗು ಕೇಳಿ ಬಂದಿದ್ದು, ಕೆಲ ಹಿರಿಯ ಶಾಸಕರು ಪಕ್ಷದ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುವ ಸಾಧ್ಯತೆಗಳಿವೆ. 

ಇಂದಿನ ಸಭೆಯ ಬಳಿಕ ಸಚಿವ ಸಂಪುಟ ವಿಸ್ತರಣೆಯ ಕುರಿತು ಪಕ್ಷ  ಸ್ಪಷ್ಟ ನಿಲುವು ತಳೆಯುವ ಸಾಧ್ಯತೆಗಳಿವೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next