Advertisement

ನಾಗರ ಪಂಚಮಿ: ಬಾಲಕನಿಂದ ಸ್ವಚ್ಛತೆ ಜಾಗೃತಿ

11:50 PM Jul 29, 2017 | Karthik A |

ಹಳೆಯಂಗಡಿ: ತುಳುನಾಡಿನ ಪವಿತ್ರ ಆಚರಣೆ ನಾಗರ ಪಂಚಮಿಯಂದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ ತೋಕೂರು ತಪೋವನದ ಡಾ| ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಜಯರಾಮ್‌ ಎಲ್ಲರ ಪ್ರಶಂಸೆಗೆ ಪಾತ್ರನಾಗಿದ್ದಾನೆ.

Advertisement

ಹೆಜಮಾಡಿ ಬಳಿಯ ಕನ್ನಂಗಾರ್‌ನ ಕಾಡಿನ ನಡುವೆ ಇರುವ ಪ್ರಕೃತಿದತ್ತವಾದ ನಾಗ ಬನದಲ್ಲಿ  ಭಕ್ತರು ತಂದ ಸೀಯಾಳ, ಪ್ಲಾಸ್ಟಿಕ್‌ ಇನ್ನಿತರ ತ್ಯಾಜ್ಯಗಳನ್ನು ತುಂಬಿಸಲೆಂದೇ ಪೇಪರ್‌ನ ದೊಡ್ಡ ಚೀಲ ಮಾಡಿಕೊಂಡು ಅದಕ್ಕೆ ‘ನನ್ನನ್ನು ಬಳಸಿ’ ಎಂಬ ಘೋಷವಾಕ್ಯವನ್ನು ಬರೆದು ತ್ಯಾಜ್ಯವನ್ನು ಸಂಗ್ರಹಿಸುತ್ತಿದ್ದ. ಇದರಿಂದ ಭಕ್ತರು ಎಲ್ಲೆಂದರಲ್ಲಿ ತ್ಯಾಜ್ಯವನ್ನು ಬಿಸಾಡುವುದು ತಪ್ಪಿದಂತಾಯಿತು.

ಶಾಲೆಯ ಇಂಟ್ಯಾಕ್ಟ್ ಕ್ಲಬ್‌ನ ಕಾರ್ಯದರ್ಶಿಯಾಗಿರುವ ಜಯರಾಮ್‌ಗೆ ಪ್ರೇರಣೆ ಆಗಿದ್ದು ಶಾಲಾ ಮುಖ್ಯ ಶಿಕ್ಷಕಿಯವರು ನಾಗರ ಪಂಚಮಿಯ ದಿನದಂದು ನಾವೆಲ್ಲ ಪ್ಲಾಸ್ಟಿಕ್‌ ಮುಕ್ತ ನಾಗರ ಪಂಚಮಿಯನ್ನು ಆಚರಿಸೋಣ ಎಂದು ಹೇಳಿರುವುದು. ಇದನ್ನೇ ಕಾರ್ಯರೂಪಕ್ಕೆ ತರಬೇಕೆಂದು ಕನ್ನಂಗಾರ್‌ನ ತನ್ನ ಬಾಳೆರಾಮ ಮನೆಯಲ್ಲಿ ತಂದೆ ದುರ್ಗಾ ಪ್ರಕಾಶ್‌ ಮತ್ತು ತಾಯಿ ಸುಮನಾರಲ್ಲಿ ಮನವಿ ಮಾಡಿಕೊಂಡು ಈ ಜಾಗೃತಿಯನ್ನು ಮೂಡಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next