Advertisement

ನೆರೆಮನೆಯಾತನ ಕಿರುಕುಳ: 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

04:53 PM Mar 24, 2018 | Team Udayavani |

ಹೊಸದಿಲ್ಲಿ: ನೆರೆಮನೆಯಾತನ ಕಿರುಕುಳ ಹಾಗೂ ಜೀವ ಬೆದರಿಕೆಯಿಂದ ಬೇಸತ್ತ 12ನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ದಿಲ್ಲಿಯಲ್ಲಿ ನಡೆದಿದೆ.

Advertisement

ದಿಲ್ಲಿಯ ಭಕ್ತಾವರಪುರದ ನಿವಾಸಿಯಾಗಿರುವ 20ರ ಹರೆಯದ ಮಯಾಂಕ್‌ ಎಂಬಾತ ಹುಡುಗಿಯ ಬೆನ್ನು ಹತ್ತಿ ಪೀಡಿಸುತ್ತಿದ್ದ. ತನ್ನ ಕೈವಶವಾಗದಿದ್ದರೆ ನಿನ್ನ ಹೆತ್ತವರನ್ನು ನಾನು ಕೊಲ್ಲುತ್ತೇನೆ ಎಂಬ ಬೆದರಿಕೆಯನ್ನು ಆತ ಹುಡುಗಿಗೆ ಹಾಕಿದ್ದ.

ಇದರಿಂದ ಬೇಸತ್ತ ಹುಡುಗಿಯು ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಳು. ಪೊಲೀಸರೀಗ ಮಯಾಂಕ್‌ನನ್ನು ಸೆರೆಹಿಡಿಯಲು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next