Advertisement

ದಿಲ್ಲಿ ಸರಕಾರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯನ್ನು ಹೊಡೆದು ಕೊಲೆ

04:21 PM Jul 19, 2018 | Team Udayavani |

ಹೊಸದಿಲ್ಲಿ : ಅತ್ಯಂತ ಆಘಾತಕಾರಿ ಘಟನೆಯೊಂದರಲ್ಲಿ  ಇಲ್ಲಿನ ಸರಕಾರಿ ಶಾಲೆಯೊಂದರ ವಿದ್ಯಾರ್ಥಿಗಳ ಗುಂಪು 17 ವರ್ಷ ಪ್ರಾಯದ ಹತ್ತನೇ ತರಗತಿಯ ವಿದ್ಯಾರ್ಥಿ ಗೌರವ್‌ ಎಂಬಾತನನ್ನು ಹೊಡೆದು ಸಾಯಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Advertisement

ನಿನ್ನೆ ಬುಧವಾರ ಇಲ್ಲಿನ ಜ್ಯೋತಿನಗರದ ಎಸ್‌ಕೆವಿ ಶಾಲೆಯಲ್ಲಿ  ವಿದ್ಯಾರ್ಥಿಗಳ ಗುಂಪಿನಲ್ಲಿ ಜಗಳ ಉಂಟಾಗಿತ್ತು. 

ವಿದ್ಯಾರ್ಥಿಗಳ ಗುಂಪಿನಿಂದ ಮಾರಣಾಂತಿಕ ಹೊಡೆತಕ್ಕೆ ಗುರಿಯಾದ ಗೌರವ್‌ ನನ್ನು ಆತನ ಸಹೋದರ ಗೋವಿಂದ ಜಿಟಿಬಿ ಆಸ್ಪತ್ರೆಗೆ ಒಯ್ದಿದ್ದ. ಆದರೆ ಅಲ್ಲಿನ ವೈದ್ಯರು ಗೌರವ್‌ ಅದಾಗಲೇ ಮೃತಪಟ್ಟಿರುವುದನ್ನು ಖಚಿತಪಡಿಸಿದರು. 

ಮೃತ ವಿದ್ಯಾರ್ಥಿ ಗೌರವ್‌ ನ ಹೆತ್ತವರು ಬಾಬರ್‌ಪುರ ನಿವಾಸಿಗಳು; ಗೌರವ್‌ ತನ್ನ ಕ್ಲಾಸ್‌ ಟೀಚರನ್ನು ಭೇಟಿಯಾಗಲು ಹೋಗಿದ್ದಾಗ ಈ ಘಟನೆ ನಡೆಯಿತು ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. 

ಪೊಲೀಸರು ಕೆಲವು ವಿದ್ಯಾರ್ಥಿಗಳ ವಿರುದ್ಧ ಕೊಲೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಗೌರವ್‌ ಸಾವಿನ ಕಾರಣ ಏನೆಂಬುದು ಅಟಾಪ್ಸಿಯಿಂದ ತಿಳಿಯಬೇಕಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next