Advertisement

ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಚಕಮಕಿ: ಬಿಜೆಪಿ ಕಾರ್ಯಕರ್ತರ ಕಾರಿಗೆ ಹಾನಿ

12:08 AM Apr 18, 2023 | Team Udayavani |

ಬೆಳ್ತಂಗಡಿ: ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಸಂದರ್ಭ ಕಾರು ಜಖಂಗೊಳಿಸಿದ್ದಲ್ಲದೆ ಇಬ್ಬರ ಮಧ್ಯೆ ಹೊ ಕೈ ವರೆಗೆ ತಲುಪಿದ ಘಟನೆ ಬೆಳ್ತಂಗಡಿಯಲ್ಲಿ ಸೋಮವಾರ ನಡೆದಿದೆ.

Advertisement

ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಮೆರವಣಿಗೆ ಸಂದರ್ಭ, ಬಿಜೆಪಿ ಕಾರ್ಯಕರ್ತರು ನಾಮಪತ್ರ ಸಲ್ಲಿಸಿ ಹಿಂದಿರುಗುವ ವೇಳೆ ಕಿನ್ಯಮ್ಮ ಹಾಲ್‌ ಬಳಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದಾಗ ಕಾಂಗ್ರೆಸ್‌ ಕಾರ್ಯಕರ್ತರು ರೊಚ್ಚಿಗೆದ್ದು ಬಿಜೆಪಿ ಕಾರ್ಯಕರ್ತರ ಕಾರಿನ ಗಾಜು ಪುಡಿ ಮಾಡಿದರೆನ್ನಲಾಗಿದೆ. ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಘಟನೆಯೂ ನಡೆಯಿತು.

ಪ್ರಕರಣದಲ್ಲಿ ವಿ.ಪ.ಸದಸ್ಯ ಹರೀಶ್‌ ಕುಮಾರ್‌ ಪುತ್ರ ಅಭಿನಂದನ್‌ ಹರೀಶ್‌ ಕುಮಾರ್‌ ಸಹಿತ ಇತ್ತಂಡಗಳ ಐವರ ವಿರುದ್ಧ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next