Advertisement

ಸತೀಶ ಜಾರಕಿಹೊಳಿ ಪಿಎ ಮೇಲೆ ಹೆಬ್ಬಾಳಕರ್‌ ಬೆಂಬಲಿಗನಿಂದ ಇರಿತ!

11:06 AM Sep 28, 2018 | |

ಬೆಳಗಾವಿ:ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಿಂದ ವಿಷ ಕಾರುತ್ತಿರುವ ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ್‌ ಹಾಗೂ ಸತೀಶ ಜಾರಕಿಹೊಳಿ ನಡುವಿನ ಗುದ್ದಾಟ ಈಗ ಮತ್ತೆ ಶುರುವಾಗಿದ್ದು, ರಾಜಕೀಯ ವೈಷಮ್ಯದಿಂದಾಗಿ ಸತೀಶ ಆಪ್ತ ಸಹಾಯಕನ ಮೇಲೆ ಮಾರಕಾಸ್ತ್ರದಿಂದ ಹೆಬ್ಬಾಳಕರ್‌ ಬೆಂಬಲಿಗ ಹಲ್ಲೆ  ಮಾಡಿದ್ದಾನೆ.

Advertisement

ತಾಲೂಕಿನ ಮಾರಿಹಾಳ ಗ್ರಾಮದಲ್ಲಿ ಗುರುವಾರ ರಾತ್ರಿ ಗ್ರಾಮದ ಬೇರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋದಾಗ
ಹಲ್ಲೆ ಮಾಡಲಾಗಿದೆ. ಸತೀಶನ ಆಪ್ತಸಹಾಯಕ ಆಸೀಫ್‌ ಹುಸೇನ ಮುಲ್ಲಾ ಗಾಯಗೊಂಡಿದ್ದಾರೆ. ಹಲ್ಲೆ ಮಾಡಿದ ಹೆಬ್ಟಾಳಕರ ಬೆಂಬಲಿಗ, ಮಾರಿಹಾಳ ಗ್ರಾಪಂ ಉಪಾಧ್ಯಕ್ಷ ತೌಸೀಫ್‌ ಫ‌ಣಿಬಂದ ಪರಾರಿಯಾಗಿದ್ದಾನೆ.
ಗಾಯಾಳು ಆಸೀಫ್‌ ಮುಲ್ಲಾನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲ್ಲೆಯಿಂದಾಗಿ
ಕೈ ಬೆರಳು ಹಾಗೂ ತಲೆಗೆ ಪೆಟ್ಟಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಆಸೀಫ್‌ನನ್ನು ಭೇಟಿಯಾದ ಶಾಸಕ
ಸತೀಶ ಜಾರಕಿಹೊಳಿ ಆರೋಗ್ಯ ವಿಚಾರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಸತೀಶ ಜಾರಕಿಹೊಳಿ, ಈ ಇಬ್ಬರೂ ಕಾಂಗ್ರೆಸ್‌ ಕಾರ್ಯಕರ್ತರಾಗಿ¨ªಾರೆ.
ಗಾಯಾಳು ಆಸೀಫ್‌ ನಮ್ಮೊಂದಿಗೆ ಇರುತ್ತಾನೆ. ಪೊಲೀಸ್‌ ತನಿಖೆಯಿಂದ ಸತ್ಯ ಬಯಲಾಗಲಿದೆ. ಪೊಲೀಸರು
ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಗಾಯಾಳು ಆಸೀಫ್‌ ಮುಲ್ಲಾ ಮಾತನಾಡಿ, ಹಿಂದಿನಿಂದ ತೌಸೀಫ್‌ ಬಂದು ಹಲ್ಲೆ ಮಾಡಿದ್ದಾನೆ. ಯಾವ ಕಾರಣಕ್ಕಾಗಿ ಹಲ್ಲೆ ಮಾಡಿದ್ದಾನೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

ಗಾಯಾಳು ಆಸೀಫ‌ನ ತಂದೆ ಹುಸೇನ ಮುಲ್ಲಾ ಮಾತನಾಡಿ, ಮೊದಲಿನಿಂದಲೂ ತೌಸೀಫ್‌ ಇಂಥ ಕೆಲಸವನ್ನೇ ಮಾಡಿಕೊಂಡು ಬಂದಿದ್ದಾ ನೆ. ಅನೇಕ ಸಲ ಇಂಥ ಘಟನೆಗಳು ನಡೆದಿವೆ. ನನ್ನ ಮಗ ರಾಜಕೀಯ ಮಾಡುತ್ತಿದ್ದರೂ ಯಾರ ಗೋಜಿಗೂ ಹೋಗುತ್ತಿರಲಿಲ್ಲ ಎಂದು ವಿವರಿಸಿದರು. ಮಾರಿಹಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next