Advertisement

ಹೆಗ್ಗೊಡಿನಲ್ಲಿ ಸ್ವತ್ಛತಾ ಆಂದೋಲನಕ್ಕೆ ಕೈಜೋಡಿಸಿದ ನಾಗರಿಕರುಫೀ

05:28 PM Aug 13, 2018 | |

ಸಾಗರ: ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದ ನೀನಾಸಂ, ಚರಕ ಸಂಘಟನೆ, ಕಿನ್ನರ ಮೇಳ ಮೊದಲಾದ ಹತ್ತು ಹಲವು ಹಿರಿಮೆಗಳನ್ನು ತನ್ನದಾಗಿಸಿಕೊಂಡಿರುವ ತಾಲೂಕಿನ ಹೆಗ್ಗೊಡಿನ ಪ್ರಜ್ಞಾವಂತ ಜನ ಕಳೆದ ಕೆಲವು ದಿನಗಳಿಂದ
ತೀವ್ರ ಅಸಹನೆಗೆ ತುತ್ತಾಗಿದ್ದರು. ತಮ್ಮ ಗ್ರಾಮದಲ್ಲಿ ಕಾಣಿಸಿಕೊಂಡಿರುವ ಕಸ, ಕೊಳಚೆ, ಕೊಚ್ಚೆಗಳಿಂದ ತಮ್ಮಲ್ಲಿಗೆ ಭೇಟಿ ನೀಡುವ ಜನರೆದುರು ತಮ್ಮ ಊರಿನ ಗೌರವ ನಷ್ಟವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಅವರೇ ನಾವು ನಮ್ಮೂರು ಎಂಬ ಸಂಘಟನೆಯಡಿ ಸ್ವತ್ಛತೆಯ ಆಂದೋಲನವನ್ನು ಆರಂಭಿಸಿ ಗಮನ ಸೆಳೆದಿದ್ದಾರೆ.

Advertisement

ಅಂತಾರಾಷ್ಟ್ರೀಯವಾಗಿ ಹೆಸರುಗಳಿಸಿರುವ ಹೆಗ್ಗೊàಡನ್ನು ಕಣ್ತುಂಬಿಕೊಳ್ಳಲು ಅಪರಿಚಿತರು ಯಾರಾದರೂ ಬಂದರೆ ಬಹುಶಃ ಇಲ್ಲಿನ ವಾತಾವರಣವನ್ನು ನೋಡಿ ನಾವು ಕೇಳಿದ ಹೆಗ್ಗೊàಡು ಇದೇ ಇರಬಹುದೇ ಎಂದು ಒಂದು ಕ್ಷಣ ದಿಗಿಲುಗೊಳ್ಳಬಹುದು. ಗಬ್ಬುನಾರುತ್ತಿರುವ ಹೆಗ್ಗೊಡು ಬಸ್‌ ನಿಲ್ದಾಣ, ಸ್ವತ್ಛತೆಯನ್ನೇ ಕಾಣದ ಚರಂಡಿಗಳು, ರಸ್ತೆಯ ಇಕ್ಕೆಲಗಳಲ್ಲೂ ಬೆಳೆದು ನಿಂತ ಲಂಡನ್‌ ಗಿಡಗಳು, ಕಂಡಕಂಡಲ್ಲಿ ಅಗೆದುಗಿದು ಬಿಸಾಡಿದ ಪ್ಲಾಸ್ಟಿಕ್‌ ಪೊಟ್ಟಣಗಳು, ಹೆಂಡದ ಬಾಟಲಿಗಳು, ಹೊಂಡ ಗುಂಡಿಗಳಿಂದ ತುಂಬಿಕೊಂಡಿರುವ ಹೆಗ್ಗೊಡಿನ ಮುಖ್ಯ ರಸ್ತೆ ಚಿತ್ರಣಗಳನ್ನು ಹೆಗ್ಗೊಡು ಗ್ರಾಪಂ ಸುತ್ತಮುತ್ತಲೇ ಕಾಣಬಹುದು ಎಂದು ಕರಪತ್ರದ ಮೂಲಕ ಜನರನ್ನು ಜಾಗೃತಗೊಳಿಸುವ ಪ್ರಯತ್ನ ನಡೆಯಿತು.

ನೀನಾಸಂ, ಶಾಲೆ, ಕಾಲೇಜು, ಬ್ಯಾಂಕ್‌, ಪೋಸ್ಟ್‌ ಆಫೀಸ್‌, ಹಾಲು ಒಕ್ಕೂಟ, ಅಂಗಡಿ ಮುಂಗಟ್ಟುಗಳಿಂದ ನಗರದ ಸಾಮ್ಯತೆಯನ್ನೂ ಹೊಂದಿರುವ ಹೆಗ್ಗೊಡಿನಲ್ಲಿ ಸದಾ ಜನರು ಮೂಲಭೂತ ಅವಶ್ಯಕತೆಗಾಗಿ ಓಡಾಡುವ ಕೇಂದ್ರ ಭಾಗವೇ ಗಬ್ಬೆದ್ದು ನಾರುತ್ತಿದೆ. ಹಲವಾರು ಸಂಘ-ಸಂಸ್ಥೆಗಳು ಈ ಭಾಗದಲ್ಲಿದ್ದು ನಮ್ಮ ಹೆಗ್ಗೊಡನ್ನು ಸ್ವತ್ಛ ಸುಂದರವಾಗಿ ಕಾಪಾಡಿಕೊಳ್ಳಲು ಮನಸು ಮಾಡದಿರುವುದು ವಿಷಾದನೀಯ. ಎಲ್ಲ ಕೆಲಸಗಳನ್ನು ಸರ್ಕಾರವೇ ಮಾಡಬೇಕು ಎಂದು ನಿರೀಕ್ಷಿಸದೇ ನಾವು ಸತಜೆಗಳಾಗಿ ನಮ್ಮ ಪಾಲಿನ ಕರ್ತವ್ಯಗಳನ್ನು ನಿಭಾಯಿಸುವುದು ದೇಶಕ್ಕೆ ಸಲ್ಲಿಸುವ ಸೇವೆ ಎಂದು ಪ್ರತಿಪಾದಿಸಿ ಒಂದು ಸಂಘಟನೆಯನ್ನು ಹುಟ್ಟುಹಾಕುವ ಕೆಲಸ ಆಗಸ್ಟ್‌ ಮೊದಲ ವಾರದಲ್ಲಿ ನಡೆದಿತ್ತು. ಆ ದಿನ ಆ ಭಾಗದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಗ್ರಾಮಸ್ಥರು ಹಾಗೂ ಶಾಲಾ ವಿದ್ಯಾರ್ಥಿಗಳು ಜಾಥಾ ನಡೆಸಿದ್ದರು.

ಚಿದಂಬರರಾವ್‌ ಜಂಬೆ ಗೌರವಾಧ್ಯತೆಯಲ್ಲಿ ಆರಂಭವಾಗಿರುವ ಸಂಘಟನೆ ತೀವ್ರ ಕಾರ್ಯಾಚರಣೆಗಿಳಿದಿದೆ. ನಾವು-ನಮ್ಮೂರು ಸಮಿತಿಯ ಆಶ್ರಯದಲ್ಲಿ ಈ ಶನಿವಾರ ಗ್ರಾಮದ ಸ್ವತ್ಛತೆ ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಿತು. ರಾಗಿ ಹಕ್ಲು, ವಿವೇಕಾನಂದ ವೃತ್ತ, ಹೊನ್ನೇಸರ ಬೈಪಾಸ್‌ ರಸ್ತೆ, ಪಿಎಲ್‌ಡಿ ಬ್ಯಾಂಕ್‌ ಆವರಣ ವ್ಯಾಪ್ತಿಯಲ್ಲಿ ಸ್ವತ್ಛತೆ ಕಾರ್ಯ ನಡೆಸಲಾಯಿತು.
 
ಸುಮಾರು 250 ಜನರು ವಿವಿಧ ತಂಡಗಳಲ್ಲಿ ಕಾರ್ಯ ನಡೆಸಿದರು. ಕಾರ್ಯಕ್ರಮದ ಮುಂದಿನ ಭಾಗವಾಗಿ ಹೆಗ್ಗೊàಡು ಕೇಂದ್ರದ ನಾಲ್ಕು ದಿಕ್ಕುಗಳ ರಸ್ತೆಗಳ ಆಜುಬಾಜಲ್ಲಿ ಸಾಲು ಗಿಡಗಳನ್ನು ನೆಡಲು ಯೋಜಿಸಲಾಗಿದೆ. ಈಗ ಸುರಿಯುತ್ತಿರುವ ಮಳೆ ಕಡಿಮೆ ಆದ ನಂತರ ಜಾನುವಾರುಗಳಿಂದ ರಕ್ಷಣೆ ವ್ಯವಸ್ಥೆ ಮಾಡಿಯೇ ಗಿಡಗಳನ್ನು ನೆಡುತ್ತೇವೆ. ಈ ಆಂದೋಲನ ಮುಕ್ತಾಯವಾಗುವುದಿಲ್ಲ. ಇದರ ಜೊತೆಗೆ ಪಶ್ಚಿಮ ಘಟ್ಟಗಳತ್ತ ದಿಟ್ಟ ಹೆಜ್ಜೆ, ದ್ಯಾವಾಸ ಪುನರುಜ್ಜೀವನ ಮಾದರಿಯ ಸಂಘಟನೆಗಳ ಮೂಲಕವೂ ಪರಿಸರದ ಸಂರಕ್ಷಣೆಯ ಹೊಣೆಯನ್ನು ಸರ್ಕಾರಿ ವ್ಯವಸ್ಥೆಯ
ಮೊರೆ ಹೋಗದೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸಂಘಟನೆಯೊಳಗಿರುವ ನೀನಾಸಂನ ಶ್ರೀಪಾದ್‌ ಭಾಗವತ್‌ ತಿಳಿಸಿದರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚಿದಂಬರ ರಾವ್‌ ಜಂಬೆ, ತಾಪಂ ಸದಸ್ಯ ರಘುಪತಿ ಭಟ್‌, ಪ್ರಭಾಕರ ಸಾಂಶಿ, ವಿಸಂ ಸಂಸ್ಥೆಯ ಸತ್ಯನಾರಾಯಣ ಭಾಗಿ, ಕೇಶವ ಸಂಪೆಕೈ, ಗಣಪತಿ, ವಿದ್ಯಾಧರ, ಏಸುಪ್ರಕಾಶ್‌, ಪ್ರಸನ್ನ, ರಾಜಶೇಖರ, ಕೃಷ್ಣಮೂರ್ತಿ, ನಾಗರಾಜ, ಸತೀಶ, ಶ್ರೀಪಾದ ಭಾಗವತ್‌ ಮುಂತಾದ ಹಲವು ಪ್ರಮುಖರು ಈ ಆಂದೋಲನದಲ್ಲಿ ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next