Advertisement

ಕಾಗೆ ಮೊಗದಲ್ಲಿ ನಗು

01:49 PM Oct 06, 2021 | Team Udayavani |

ಕಳೆದ ವಾರ ಬಿಡುಗಡೆಯಾಗಿದ್ದ “ಕಾಗೆ ಮೊಟ್ಟೆ’ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಚಿತ್ರದಗಳಿಕೆಯಲ್ಲೂ ನಿಧಾನ ಏರಿಕೆಯಾಗುತ್ತಿದೆ.

Advertisement

ಇದೇವಿಷಯವನ್ನು ಹಂಚಿಕೊಳ್ಳಲು ಮಾಧ್ಯಮಗಳಮುಂದೆ ಬಂದಿದ್ದ ಚಿತ್ರತಂಡ, “ಕಾಗೆ ಮೊಟ್ಟೆ’ಯಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆಮಾತನಾಡಿತು. ಮೊದಲಿಗೆ ಮಾತಿಗಿಳಿದ ಚಿತ್ರದ ನಿರ್ದೇಶಕ ಚಂದ್ರಹಾಸ್‌, “ಬಹುತೇಕ ಹೊಸಬರೇ ಸೇರಿಕೊಂಡು ಮಾಡಿದ ಸಿನಿಮಾವಾದರೂ,ಬಿಡುಗಡೆಯ ನಂತರ ಪ್ರೇಕ್ಷಕರಿಂದ ಉತ್ತಮಪ್ರ ತಿಕ್ರಿಯೆ ಸಿಗುತ್ತಿದೆ. ನಮ್ಮ ನಿರೀಕ್ಷೆಗೂ ಮೀರಿದಬೆಂಬಲ, ಸಹಕಾರ ಪ್ರೇಕ್ಷಕರಿಂದ ಮತ್ತು ಚಿತ್ರರಂಗ,ಮಾಧ್ಯಮಗಳಿಂದ ಸಿಗುತ್ತಿದೆ ಎಂದರು.

ಇದನ್ನೂ ಓದಿ:ಹೊಸಬರಿಗೆ ಎದುರಾಗಲಿದೆ ಥಿಯೇಟರ್‌ ಸಮಸ್ಯೆ

ಚಿತ್ರದ ಬಗ್ಗೆಮಾತನಾಡಿದ ನಟ ಗುರುರಾಜ್‌, “ಆಡಿಯನ್ಸ್‌ಕಡೆಯಿಂದ ಸಿಗುತ್ತಿರುವ ರೆಸ್ಪಾನ್ಸ್‌ ನೋಡಿದರೆಖುಷಿಯಾಗುತ್ತಿದೆ. ಬಹಳ ಸಮಯದ ನಂತರಒಳ್ಳೆಯ ಟೀಮ್‌ ಜೊತೆ ಒಂದೊಳ್ಳೆ ಸಿನಿಮಾಮಾಡಿರುವ ಖುಷಿಯಿದೆ’ ಎಂದರು.

ಇನ್ನು “ಕಾಗೆ ಮೊಟ್ಟೆ’ ಚಿತ್ರದಲ್ಲಿ ಹಿರಿಯ ನಟಸತ್ಯಜಿತ್‌ ಕೂಡ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಸತ್ಯಜಿತ್‌ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಚಿತ್ರದ ಒಂದು ಪ್ರದರ್ಶನದ ಗಳಿಕೆಯ ಹಣವನ್ನು ಸತ್ಯಜಿತ್‌ ಅವರ ಚಿಕಿತ್ಸೆಗಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next