Advertisement

RBI ಗವರ್ನರ್‌ಗೆ ಸಿಐಸಿ ನೋಟಿಸ್‌

07:00 AM Nov 05, 2018 | Team Udayavani |

ಹೊಸದಿಲ್ಲಿ: ಉದ್ದೇಶಪೂರ್ವಕ ಸುಸ್ತಿದಾರರ ವಿವರ ಬಹಿರಂಗಗೊಳಿಸಲು ಸುಪ್ರೀಂಕೋರ್ಟ್‌ ಆದೇಶಿಸಿದ್ದರೂ ಅದನ್ನು ಅನುಸರಿಸದ ಹಿನ್ನೆಲೆಯಲ್ಲಿ RBI ಗವರ್ನರ್‌ ಊರ್ಜಿತ್‌ ಪಟೇಲ್‌ಗೆ ಕೇಂದ್ರ ಮಾಹಿತಿ ಆಯೋಗ (ಸಿಐಸಿ) ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

Advertisement

ಅಷ್ಟೇ ಅಲ್ಲದೆ, RBI ನಿವೃತ್ತ ಗವರ್ನರ್‌ ರಘುರಾಂ ರಾಜನ್‌ ಅವರು ಅನುತ್ಪಾದಕ ಸಾಲಕ್ಕೆ ಸಂಬಂಧಿಸಿ ಬರೆದಿರುವ ಪತ್ರವನ್ನು ಬಹಿರಂಗಗೊಳಿಸುವಂತೆಯೂ ಪ್ರಧಾನಿ ಕಾರ್ಯಾಲಯ, ಹಣಕಾಸು ಸಚಿವಾಲಯ ಮತ್ತು RBIಗೆ ಸಿಐಸಿ ಸೂಚಿಸಿದೆ. ಸುಪ್ರೀಂ ಆದೇಶ ಪಾಲಿಸದ್ದಕ್ಕೆ ನಿಮಗೆ ಗರಿಷ್ಠ ದಂಡವನ್ನೇಕೆ ವಿಧಿಸಬಾರದು ಎಂದು ಪಟೇಲ್‌ರನ್ನು ಸಿಐಸಿ ಪ್ರಶ್ನಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next