Advertisement

ಸರಕಾರದ ಆದೇಶ ಪಾಲಿಸಿ ಕ್ರಿಸ್ಮಸ್‌ ಆಚರಣೆ      

03:00 AM Dec 24, 2021 | Team Udayavani |

ಮಂಗಳೂರು: ಕ್ರಿಸ್ಮಸ್‌ ಆಚರಣೆಯ ಮೇಲೆ ಈ ವರ್ಷ ಕೂಡ ಕೊರೊನಾ ಕರಿನೆರಳು ಬಿದ್ದಿದೆ. ಅನಗತ್ಯ ಸಂಭ್ರಮವನ್ನು ಬದಿಗೊತ್ತಿ ಸರಕಾರದ ನೀಡಿರುವ ಮಾರ್ಗಸೂಚಿ ಪಾಲಿಸಿಕೊಂಡು ಏಸುಕ್ರಿಸ್ತರ ಜನನದ ಹಬ್ಬವನ್ನು ಆಚರಿಸುತ್ತೇವೆ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಹೇಳಿದ್ದಾರೆ.

Advertisement

ಗುರುವಾರ ಬಿಷಪ್ಸ್‌ ಹೌಸ್‌ನಲ್ಲಿ ಮಾಧ್ಯಮದವರ ಜತೆ ಕ್ರಿಸ್ಮಸ್‌ ಸಹಮಿಲನದಲ್ಲಿ ಮಾತನಾಡಿ, ಸಂದೇಶ ನೀಡಿದರು. ಯಾವುದೇ ಚರ್ಚ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮಗಳು ಇರುವುದಿಲ್ಲ. ಕ್ರಿಸ್ಮಸ್‌ ಹಬ್ಬದ ವಿಶೇಷ ಪೂಜೆ ಚರ್ಚ್‌ಗಳಲ್ಲಿ ಡಿ. 24ರ ಸಂಜೆ 7/ 7.30 ಗಂಟೆಗೆ ಮತ್ತು ಡಿ. 25ರಂದು ಬೆಳಗ್ಗೆ ಆಯೋಜಿಸುವ ಮೂಲಕ ಒಂದೇ ಬಾರಿಗೆ ಹೆಚ್ಚಿನ ಜನರು ಸೇರದಂತೆ ನೋಡಿಕೊಳ್ಳಲಾಗುವುದು ಎಂದರು.

ಪಾಲನಾ ಪರಿಷತ್‌ ಕಾರ್ಯದರ್ಶಿ ಪ್ರೊ| ಜಾನ್‌ ಡಿಸಿಲ್ವ , ಮಾಧ್ಯಮ ಸಲಹೆಗಾರ ಎಲಿಯಾಸ್‌ ಫೆರ್ನಾಂ ಡಿಸ್‌ ಉಪಸ್ಥಿತರಿದ್ದರು. ರೋಯ್‌ ಕ್ಯಾಸ್ಟಲಿನೋ ಕಾರ್ಯಕ್ರಮ ನಿರೂಪಿಸಿ ವಂ| ಜೆ.ಬಿ.ಸಲ್ಡಾನಾ ವಂದಿಸಿದರು.

ಗ್ರಾಮೀಣ ಭಾಗದಲ್ಲಿ ಬಿಷಪ್‌ ಬಲಿ ಪೂಜೆ
ಬಿಷಪ್‌ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಅವರು ಹಬ್ಬದ ವಿಶೇಷ ಪೂಜೆಯನ್ನು ಡಿ. 24ರಂದು ನೆಲ್ಲಿಕಾರು ಚರ್ಚ್‌ ನಲ್ಲಿ, ಡಿ.25 ರಂದು ಬೆಳಗ್ಗೆ 8ಕ್ಕೆ ಮಂಗಳೂರಿನ ರೊಸಾರಿಯೋ ಕೆಥೆಡ್ರಲ್‌ನಲ್ಲಿ ನೆರವೇರಿಸುವರು.

Advertisement

Udayavani is now on Telegram. Click here to join our channel and stay updated with the latest news.

Next