Advertisement

ಧಾರವಾಡ ವಕೀಲರ ಸಂಘದ ಅಧ್ಯಕ್ಷರಾಗಿ ಬೆಳ್ಳಕ್ಕಿ ಆಯ್ಕೆ

01:21 PM Apr 08, 2017 | Team Udayavani |

ಧಾರವಾಡ: ಇಲ್ಲಿಯ ಧಾರವಾಡ ವಕೀಲರ ಸಂಘದ ಆಡಳಿತ ಮಂಡಳಿಗೆ ಶುಕ್ರವಾರ ಚುನಾವಣೆ ನಡೆಯಿತು. ಕಳೆದ ಮೂರು ಅವಧಿಗೆ ವಕೀಲರ ಸಂಘದ ಅಧ್ಯಕ್ಷರಾಗಿದ್ದ ವಿ.ಡಿ.ಕಾಮರೆಡ್ಡಿ ವಿರುದ್ಧ ಈ ಸಲ ಆರ್‌.ಯು.ಬೆಳ್ಳಕ್ಕಿ ಕಣಕ್ಕಿಳಿದು ಜಯಶಾಲಿಯಾದರು.

Advertisement

ಆರ್‌ .ಯು.ಬೆಳ್ಳಕ್ಕಿ 518 ಮತ ಪಡೆದು ಗೆಲುವು ಸಾಧಿಸಿದರೆ, ವಿ.ಡಿ.ಕಾಮರೆಡ್ಡಿ 457 ಮತ ಪಡೆದು ಪರಾಭವಗೊಂಡರು. ಉಪಾಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದ್ದ ಪ್ರಕಾಶ ಉಡಿಕೇರಿ 427 ಮತ ಪಡೆದು ಗೆಲುವು ಸಾಧಿಸಿದರೆ ಅವರ ಪ್ರತಿಸ್ಪರ್ಧಿಗಳಾದ ಆರ್‌.ಜಿ.ನಾಯ್ಡು (189), ಆರ್‌.ಎಚ್‌.ಯಲಿಗಾರ (186), ವೈ.ಪಿ.ಮದೂರ (178) ಮತ ಪಡೆದರು. 

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಹಿಂದಿನ ಬಾರಿ ಕಾರ್ಯದರ್ಶಿಯಾಗಿದ್ದ ಸಿ.ಎಸ್‌.ಪೊಲೀಸ್‌ ಪಾಟೀಲ ಈ ಸಲವೂ 505 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿಸ್ಪರ್ಧಿ ಸಚಿನ ಕುಲಕರ್ಣಿ (480) ಅವರನ್ನು ಸೋಲಿಸಿದರು. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌.ಬಿ.ಬನ್ನೂರ 487 ಮತಗಳನ್ನು ಪಡೆಯುವ ಮೂಲಕ ತಮ್ಮ ಪ್ರತಿ ಸ್ಪರ್ಧಿ ವಿ.ಎಂ.ಸಾಲಿ (422) ಅವರನ್ನು ಮಣಿಸಿದರು. 

ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ಎನ್‌.ಆರ್‌.ಮಟ್ಟಿ 450 ಮತಗಳನ್ನು ಪಡೆದು ಆಯ್ಕೆಯಾದರೆ, ಅವರ ಪ್ರತಿಸ್ಪರ್ಧಿಗಳಾದ ಪ್ರಕಾಶ ರಟಗೇರಿ (388) ಹಾಗೂ ವಿ.ಎಚ್‌.ಪಾಟೀಲ (169) ಮತಗಳನ್ನು ಪಡೆದರು. ಇನ್ನು ಕಾರ್ಯಕಾರಿ ಆಡಳಿತ ಮಂಡಳಿಗೆ ಕಣದಲ್ಲಿದ್ದ 11 ಜನರ ಪೈಕಿ ಹೇಮಂತ್‌ ಕನಕಿಕೊಪ್ಪ (721), ಶ್ರೀಧರ್‌ ಹಂಚಿನಾಳ (641), ಸಂತೋಷ ಗೋಡಿ (521), ಮಹೇಶ ಕೆಲಗೇರಿ (504), ವೀರಣ್ಣ ಕಾಜಗಾರ (477), ಕಲ್ಮೇಶ ನಿಂಗಣ್ಣವರ (473) ಮತ ಪಡೆದು ಆಯ್ಕೆಗೊಂಡಿದ್ದಾರೆ. 

ಉಳಿದಂತೆ ಮಹಿಳಾ ಪ್ರತಿನಿಧಿ ಹುದ್ದೆಗೆ ಸ್ಪರ್ಧಿಸಿದ್ದ ರೂಪಾ ಕೆಂಗಾನೂರ 510 ಮತ ಪಡೆದು ಗೆಲುವು ಸಾಧಿಸಿದರೆ, ಅವರ ಪ್ರತಿಸ್ಪರ್ಧಿ ಸಾವಿತ್ರಿ ಕುಲಕರ್ಣಿ 450 ಮತಗಳನ್ನು ಪಡೆದು ಪರಾಭವಗೊಂಡರು. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ವ್ಯವಸ್ತೆ ಮಾಡಲಾಗಿತ್ತು. 

Advertisement

ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನದಲ್ಲಿ ಒಟ್ಟು 1139 ಮತಗಳ ಪೈಕಿ 987 ಮತಗಳು ಚಲಾವಣೆಗೊಂಡಿವೆ. ಸಂಜೆ ಮತದಾನ ಮುಗಿದ ಬಳಿಕ ಮತ ಎಣಿಕೆ ತಡರಾತ್ರಿವರೆಗೂ ನಡೆಯಿತು. ಮತ ಎಣಿಕೆ ಆದಂತೆ ಫಲಿತಾಂಶ ಪ್ರಕಟಿಸಲಾಯಿತು. ವಿಜೇತರ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next