Advertisement

ಸೈಬರ್‌ ಪೊಲೀಸರಿಂದ ಜನಜಾಗೃತಿ

05:55 PM Apr 12, 2020 | Naveen |

ಚಿತ್ರದುರ್ಗ: ಕೋವಿಡ್ ವೈರಸ್‌ ಕುರಿತು ನಗರದಲ್ಲಿ ಸೈಬರ್‌ ಪೊಲೀಸರು ಜನಜಾಗೃತಿ ಜಾಥಾ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ
ಜಾಥಾಗೆ ಚಾಲನೆ ನೀಡಿದರು.

Advertisement

ನಗರದ ಗೋಪಾಲಪುರ ರಸ್ತೆಯಿಂದ ಜಾಥಾ ಆರಂಭಿಸಿದ ಪೊಲೀಸರು, ಜೆಸಿಆರ್‌ ವೃತ್ತ, ಜೆಸಿಆರ್‌ ಮುಖ್ಯರಸ್ತೆ ಮೂಲಕ ಪಟೇಲ್‌ ವೀರನಾಗಪ್ಪ ಕಲ್ಯಾಣ ಮಂಟಪದವರೆಗೆ ಮೈಕ್‌ನಲ್ಲಿ ಜನರಿಗೆ ಮಾಹಿತಿ ನೀಡುತ್ತಾ ಸಾಗಿದರು. ಕೋವಿಡ್ ವೈರಸ್‌ ಕೊಂಡಿ ತಪ್ಪಿಸುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಅದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಕೊರೊನಾ ಮಹಾಮಾರಿಯಿಂದ ದೂರ ಉಳಿಯಬಹುದು. ಅನಗತ್ಯವಾಗಿ ಯಾರೂ ಕೂಡಾ ಮನೆಯಿಂದ ಹೊರಗೆ ಬಾರದೆ ಕೋವಿಡ್ ಹರಡುವುದನ್ನು ತಪ್ಪಿಸಬಹುದು. ಇದಕ್ಕೆ ಚಿತ್ರದುರ್ಗದ ನಾಗರಿಕರು ಸಹಕಾರ ನೀಡಿ ಎಂದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾ ಧಿಕಾರಿ ಎಂ.ಬಿ. ನಂದಗಾವಿ, ಡಿವೈಎಸ್‌ಪಿ ಪಾಂಡುರಂಗಪ್ಪ, ಮಹಿಳಾ ಠಾಣೆ ಪಿಐ ಲಕ್ಷ್ಮೀಕಾಂತ್‌, ಪಿಐ ನಯೀಮ್‌ ಅಹಮ್ಮದ್‌ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next