Advertisement

ಬದುಕನ್ನುಉತ್ತಮವಾಗಿ ರೂಪಿಸಿಕೊಳ್ಳಿ

01:57 PM Apr 07, 2022 | Team Udayavani |

ಚಿತ್ರದುರ್ಗ: ಹುಟ್ಟು-ಸಾವು ನಮ್ಮ ಕೈಯಲ್ಲಿಲ್ಲ. ಆದರೆಇವೆರಡರ ನಡುವಿನ ಬದುಕು ನಮ್ಮ ಕೈಯಲ್ಲಿದೆ.ಅದನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕಿದೆ ಎಂದುವೇಣುಕಲ್ಲುಗುಡ್ಡದ ಹಾಲುಸ್ವಾಮಿ ಮಠದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ನಗರದ ರಂಗಯ್ಯನಬಾಗಿಲ ಬಳಿಯ ಉಜ್ಜಯನಿಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶ್ರೀಮದ್‌ಉಜ್ಜಯಿನಿ ಸದ್ಧರ್ಮ ಸಿಂಹಾಸನಾ ಧೀಶ್ವರ ಲಿಂಗೈಕ್ಯಮರುಳಾರಾಧ್ಯ ಶಿವಾಚಾರ್ಯ ಶ್ರೀಗಳ 27ನೇವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಮಾತನಾಡಿದರು.ನಾವು ಲಿಂಗೈಕ್ಯ ಶ್ರೀಗಳು ಜೊತೆಯಲ್ಲೇ ಅಭ್ಯಾಸವನ್ನುಮಾಡಿದ್ದೇವೆ.

Advertisement

ನಮಗಿಂತ 10 ವರ್ಷ ಮುಂಚೆಯೇಅವರು ಪಟ್ಟಾ ಧಿಕಾರ ಸ್ವೀಕಾರ ಮಾಡಿದ್ದರು.ಮಾತೃಹೃದಯಿಗಳಾಗಿದ್ದ ಅವರು ಸಮಾನತೆಯನ್ನುತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಎಲ್ಲರನ್ನೂಸಮಾನವಾಗಿ ಕಾಣುತ್ತಿದ್ದರು ಎಂದು ಸ್ಮರಿಸಿದರು.ನಾವು ಎಷ್ಟು ವರ್ಷ ಬದುಕಿದ್ದೇವೆ ಎನ್ನುವುದುಮುಖ್ಯವಲ್ಲ. ಬದುಕಿದ್ದ ದಿನಗಳಲ್ಲಿ ಏನು ಸಾಧನೆಮಾಡಿದ್ದೇವೆ ಎನ್ನುವುದು ಮುಖ್ಯವಾಗಬೇಕು.ಶ್ರೀಮಠ ಅಭಿವೃದ್ಧಿಯಾಗಬೇಕು.

ಭಕ್ತಾ ದಿಗಳಿಗೆಸರಿಯಾದ ಮಾರ್ಗದರ್ಶನ ದೊರಕಬೇಕಿದೆ.ಇಲ್ಲಿನ ಉಜ್ಜಯಿನಿ ಮಠದ ನಿಯೋಜಿತ ಉತ್ತರಾಧಿಕಾರಿಗಳಾದ ಅಭಿಷೇಕ ದೇವರು ಉತ್ತಮವಾದಮಾರ್ಗದರ್ಶನದಲ್ಲಿ ಶಿಕ್ಷಣ ಪಡೆಯುವ ಮೂಲಕಶ್ರೀಮಠವನ್ನು ಪ್ರಗತಿಯತ್ತ ಕೊಂಡ್ನೂಯುವಂತಾಗಲಿಎಂದು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next