Advertisement

ಪಾನಗೋಷ್ಠಿಯಲ್ಲಿ ಪಾಲ್ಗೊಂಡ ಕಾನ್ಸ್ ಟೇಬಲ್‌ ಅಮಾನತು

05:33 PM May 06, 2020 | Naveen |

ಚಿತ್ರದುರ್ಗ: ಸಮವಸ್ತ್ರದಲ್ಲಿರುವಾಗಲೇ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸ್‌ ಕಾನ್ಸ್‌ಟೇಬಲ್‌ ಮದ್ಯ ಸೇವಿಸಿದ್ದ ವಿಡಿಯೋ ವೈರಲ್‌ ಆಗಿದೆ. ಇದರ ಬೆನ್ನಲ್ಲೇ ಕಾನ್ಸ್‌ಟೇಬಲ್‌ ರಾಜು ಚೌವ್ಹಾಣ್‌ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

Advertisement

ಚಿತ್ರದುರ್ಗ ತಾಲೂಕು ಪಲ್ಲವಗೆರೆ ಬಳಿ ಸ್ನೇಹಿತರೊಂದಿಗೆ ಜಮೀನೊಂದರಲ್ಲಿ ಕುಳಿತು ಎಣ್ಣೆ ಪಾರ್ಟಿ ಮಾಡಿದ್ದ ವಿಡಿಯೋ ವೈರಲ್‌ ಆಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಎಸ್ಪಿ ಜಿ. ರಾಧಿಕಾ ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸ್‌ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಚೌವ್ಹಾಣ್‌ ಅವರನ್ನು ಅಮಾನತು ಮಾಡಿದ್ದಾರೆ. ಕರ್ತವ್ಯದ ಸಂದರ್ಭದಲ್ಲೇ ಮದ್ಯ ಸೇವಿಸಿದ್ದಾರಾ ಎನ್ನುವ ಬಗ್ಗೆ ತನಿಖೆ ಮುಂದುವರೆದಿದೆ.

ನಿವೃತ್ತ ಯೋಧರಾಗಿದ್ದ ರಾಜು, ಮೂರು ವರ್ಷಗಳ ಹಿಂದೆ ಪೊಲೀಸ್‌ ಇಲಾಖೆ ಸೇರಿ ಚಿತ್ರದುರ್ಗ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸೋಮವಾರ ಪೇದೆ ರಾಜು ಅವರನ್ನು ಪಲ್ಲವಗೆರೆ ಬೀಟ್‌ಗೆ ನಿಯೋಜಿಸಲಾಗಿತ್ತು. ಮದ್ಯದಂಗಡಿಗಳು ಬಾಗಿಲು ತೆರೆದ ಬಳಿಕ ಪಾನಗೋಷ್ಠಿ ನಡೆಸಿ ಸಿಕ್ಕಿಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next