Advertisement

ಶಿಬಾರ ಗದ್ದಿಗೆಯ ಪ್ರತಿಷ್ಠಾಪನಾ ಮಹೋತ್ಸವ

03:33 PM Feb 15, 2021 | Team Udayavani |

ಚಿತ್ರದುರ್ಗ: ನಗರದ ಬುರುಜನಹಟ್ಟಿಯ ಸಿಹಿನೀರು ಹೊಂಡದ ರಸ್ತೆಯಲ್ಲಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಶಿಬಾರ ಗದ್ದಿಗೆಯ ಪ್ರತಿಷ್ಠಾಪನಾ ಮಹೋತ್ಸವ ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು.

Advertisement

ಗೊರವಯ್ಯರ ಡಮರುಗದ ಸದ್ದಿನೊಂದಿಗೆ ಭಕ್ತರು ಛಾಮರ ಬೀಸುತ್ತಾ ಸ್ವಾಮಿಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಸಿಹಿನೀರು ಹೊಂಡದಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಶಿಬಾರದ ಮಂಟಪದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ಶಿಬಾರದ ಮುಂಭಾಗ ಪ್ರಧಾನ ಅರ್ಚಕ ಹಾಗೂ ಗೊರವಯ್ಯ ರಮೇಶ್‌ ಬಾಬು ನೇತ್ರತ್ವದಲ್ಲಿ ಸುಮಾರು 70 ರಿಂದ 80 ಗೊರವಯ್ಯರ ಸಮ್ಮುಖದಲ್ಲಿ ಪೂಜಾ ಕೈಂಕರ್ಯಗಳು ಹಾಗೂ ದೋಣಿ ಸೇವೆ ಕಾರ್ಯಕ್ರಮಗಳು ನೆರವೇರಿದವು.

ಬುರುಜನಹಟ್ಟಿಯ ಸಿಹಿನೀರು ಹೊಂಡದ ರಸ್ತೆಯಲ್ಲಿನ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಶಿಬಾರದ ಶ್ರೀ ಮೈಲಾರಲಿಂಗಸ್ವಾಮಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜೆ ನೆರವೇರಲಿದೆ. ಪ್ರತಿ ಭಾನುವಾರ ಹಾಗೂ ಹುಣ್ಣಿಮೆಯಂದು ಗೊರವಯ್ಯರು ಹಾಗೂ ಭಕ್ತರಿಂದ ವಿಶೇಷ ಪೂಜೆ ಹಾಗೂ ದೋಣಿಸೇವೆ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಧಾನ ಅರ್ಚಕ ಹಾಗೂ ಗೊರವಯ್ಯ ರಮೇಶ್‌ ಬಾಬು ತಿಳಿಸಿದ್ದಾರೆ.

ಓದಿ : ಬೆಣ್ಣೆ ನಗರಿಯಲ್ಲಿ ಪೊಗರು ಖದರ್‌

Advertisement

Udayavani is now on Telegram. Click here to join our channel and stay updated with the latest news.

Next