Advertisement

ಮಠಾಧೀಶರ ಆಶೀರ್ವಾದ ಪಡೆದ ಸಿಐಡಿ ಎಸ್ಪಿ ಚನ್ನಣ್ಣವರ್‌

10:01 PM Jul 11, 2021 | Team Udayavani |

ಚಿತ್ರದುರ್ಗ: ನಗರದ ವಿವಿಧ ಮಠಗಳಿಗೆ ಸಿಐಡಿ ಎಸ್ಪಿ ರವಿ ಡಿ.  ಚನ್ನಣ್ಣನವರ್‌ ಭೇಟಿ ನೀಡಿ ಮಠಾ ಧೀಶರ ಆಶೀರ್ವಾದ ಪಡೆದರು.

Advertisement

ಮುರುಘಾ ಮಠಕ್ಕೆ ಭೇಟಿ ನೀಡಿದ ಅವರು, ಡಾ| ಶಿವಮೂರ್ತಿ ಮುರುಘಾ ಶರಣರ ಜತೆ ಮಾತುಕತೆ ನಡೆಸಿ ಆಶೀರ್ವಾದ ಪಡೆದರು. ಆನಂತರ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಗುರುಪೀಠಕ್ಕೆ ತೆರಳಿ ಶ್ರೀಗಳ ಜತೆಗೆ ಉಭಯ ಕುಶಲೋಪರಿ ಚರ್ಚಿಸಿದರು. ತಾವು ಬರೆದಿರುವ “ನಮ್ಮೊಳಗೊಬ್ಬ’ ಪುಸ್ತಕ ನೀಡಿ ಆಶೀರ್ವಾದ ಪಡೆದುಕೊಂಡರು. ಅಲ್ಲಿಂದ ಭೋವಿ ಗುರುಪೀಠಕ್ಕೆ ಭೇಟಿ ನೀಡಿ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು.

(ಚಿತ್ರದುರ್ಗ: ಸಿಐಡಿ ಎಸ್ಪಿ ರವಿ ಡಿ. ಚನ್ನಣ್ಣನವರ್‌ ಡಾ| ಶಿವಮೂರ್ತಿ ಮುರುಘಾ ಶರಣರು ಹಾಗೂ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳ ಆಶೀರ್ವಾದ ಪಡೆದರು.)

Advertisement

Udayavani is now on Telegram. Click here to join our channel and stay updated with the latest news.

Next