Advertisement

ಚಿಣ್ಣರ ಚಿತ್ರ: ಪರಿಸರ ಕಾಳಜಿಯ ಕುಡಿ

04:08 AM Mar 29, 2019 | mahesh |

“ಗಂಧದ ಕುಡಿ’ ಎಂಬ ಸಿನಿಮಾ ಬರುತ್ತಿರುವ ವಿಚಾರ ನಿಮಗೆ ಗೊತ್ತಿರ­ಬಹುದು. ಈಗ ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ವಾರ ತೆರೆಕಾಣುತ್ತಿದೆ. ಈಗಾಗಲೇ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಹಾಗೂ ಪ್ರಶಸ್ತಿ ಪಡೆದಿರುವುದರಿಂದ ಚಿತ್ರತಂಡ ಖುಷಿಯಾಗಿದೆ. ಸಂತೋಷ್‌ ಶೆಟ್ಟಿ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಶಿವಧ್ವಜ್‌ ಶೆಟ್ಟಿಯವರು ಕೃಷ್ಣ ಹೆಗಡೆಯಾಗಿಯೂ, ನಟಿ ಜ್ಯೋತಿ ರೈ ಶಾಲಿನಿಯಾಗಿ ನಟಿಸಿದ್ದಾರೆ. ನಿಧಿ ಸಂಜೀವ ಶೆಟ್ಟಿ ಬಾಲನಟಿಯಾಗಿ ನಟಿಸಿದ್ದಾರೆ. ಪಶ್ಚಿಮ ಘಟ್ಟದ ಹಳ್ಳಿಯೊಂದರ ದಟ್ಟ ಕಾನನದಲ್ಲಿ ಸಿಗುವ ಗಂಧದ ಗಿಡದ ಸುತ್ತ ನಡೆಯುವ ಕುತೂಹಲಕಾರಿ ಘಟನೆಯೊಂದಿಗೆ ಸಾಹಸಮಯ ಮಕ್ಕಳ ಹೋರಾಟವೇ ಗಂಧದ ಕುಡಿ ಚಿತ್ರದ ತಿರುಳು. ಸಸ್ಯ ವಿಜ್ಞಾನಿಗಳ ಮೂಲಕ ಪರಿಸರ ನಾಶದ ಬಗ್ಗೆ ಜಾಗೃತಿ, ನೈಸರ್ಗಿಕ ಮೂಲಗಳನ್ನು ಬಳಸಿ ಮನುಷ್ಯ ಪ್ರಕೃತಿಯೊಂದಿಗೆ ಸುಖವಾಗಿ ಬದುಕಬಹುದೆಂಬುದನ್ನು ಚಿತ್ರ ವಿಶ್ಲೇಷಿಸುತ್ತದೆಯಂತೆ. ಸತ್ಯೇಂದ್ರ ಪೈ ಹಾಗೂ ಕೃಷ್ಣ ಮೋಹನ್‌ ಪೈ ಈ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ಬಾಲನಟರಾದ ಬೇಬಿ ನಿಧಿ ಸಂಜೀವ ಶೆಟ್ಟಿ, ಬೇಬಿ ಕೀಷಾ, ಮಾ. ವಿಘ್ನೇಶ್‌, ಮಾ. ಶ್ರೀಶ ಶೆಟ್ಟಿ, ಮಾ. ಶ್ರೇಯಸ್‌ ಶೆಟ್ಟಿ, ಬೇಬಿ ಆ್ಯಶ್ಲಿನ್‌ ಡಿ’ಸೋಜಾ ಸೇರಿದಂತೆ ಅನೇಕರು ನಟಿಸಿದ್ದಾರೆ. ರಮೇಶ್‌ ಭಟ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಹೆಗಡೆಯ ಪಾತ್ರಕ್ಕೆ ರಮೇಶ್‌ ಭಟ್‌ ಜೀವ ತುಂಬಿದ್ದಾರೆ. ರಿಟೈರ್ಡ್‌ ಮಿಲಿಟರಿ ಆಫೀಸರ್‌ ಗಟ್ಟಿತನ, ಮೊಮ್ಮಗಳೊಂದಿಗಿನ ಆಟೋಟದಲ್ಲಿ ಪ್ರೇಕ್ಷಕರನ್ನು ಮನರಂಜಿಸಿದ್ದಾರಂತೆ ರಮೇಶ್‌ ಭಟ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next