Advertisement

ಕೋಲಾರಕ್ಕೆ ಚೀನಿಯರ ಭೇಟಿ; ಆರೋಗ್ಯ ತಪಾಸಣೆ

09:33 PM Feb 04, 2020 | Lakshmi GovindaRaj |

ಕೋಲಾರ: ವಿಶ್ವಾದ್ಯಂತ ಕೊರೊನಾ ವೈರಸ್‌ ಆತಂಕ ಮೂಡಿಸಿರುವ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಗೆ ಭೇಟಿ ನೀಡಿರುವ 23 ಚೀನಿಯರ ತಂಡದವರನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ ಘಟನೆ ನಡೆದಿದ್ದು, ಯಾವುದೇ ಆತಂಕವಿಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಪಷ್ಟಪಡಿಸಿದ್ದಾರೆ.

Advertisement

ಜಿಲ್ಲೆಗೆ ಚೀನಾದಿಂದ 23 ಮಂದಿಯ ತಂಡ ಬಂದಿರುವ ವಿಷಯ ತಿಳಿದ ಹಿನ್ನೆಲೆಯಲ್ಲಿ ಅವರನ್ನು ಭೇಟಿ ಮಾಡಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಅವರ ರಕ್ತ ಹಾಗೂ ಕಫ ಮಾದರಿಯನ್ನು ಪುಣೆಯಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಿದಾಗ ಕೊರೊನಾ ವೈರಸ್‌ ಲಕ್ಷಣಗಳು ಇಲ್ಲದಿರುವುದು ಕಂಡುಬಂದಿದೆ.

ಕೋಲಾರದ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ ನೂತನ ಕಂಪನಿಯೊಂದಲ್ಲಿ ಸಾಫ್ಟ್‌ವೇರ್‌ ಅಳವಡಿಕೆಗೆ ತಂಡವು ಜನವರಿಯಲ್ಲಿ ಜಿಲ್ಲೆಗೆ ಆಗಮಿಸಿದೆ. ಅದರಂತೆ ಚೀನಾದಲ್ಲಿ ವೈರಸ್‌ ಹೆಚ್ಚು ಹರಡಿರುವ ಭೀತಿಯಿಂದ ಚೀನಿ ತಂಡವರು ತಂಗಿದ್ದ ಹೋಟೆಲ್‌ನವರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಅದರಂತೆ ಕೂಡಲೇ ಚೀನಾ ತಂಡವನ್ನು ಭೇಟಿ ಮಾಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಚಾರಣಿ ನೇತೃತ್ವದ ಕೊರೊನಾ ವೈರಸ್‌ ಬಗ್ಗೆ ಸ್ಥಳೀಯರು ಆತಂಕಗೊಂಡಿರುವ ಬಗ್ಗೆ ಮನವರಿಗೆ ಮಾಡಿ ಅವರಿಂದ ಕಫಾ ಹಾಗೂ ರಕ್ತದ ಮಾದರಿಗಳನ್ನು ಪಡೆದುಕೊಂಡಿದ್ದಾರೆ.

ಅದರಂತೆ ಚೀನಿಯರ ತಂಡದಲ್ಲಿ ಸದಸ್ಯರಲ್ಲಿ ಕೊರೊನಾ ವೈರಸ್‌ ಲಕ್ಷಣಗಳು ಇಲ್ಲದಿರುವ ಅಂಶ ಪ್ರಯೋಗಾಲಯದ ವರದಿಯಿಂದ ಬೆಳಕಿಗೆ ಬಂದಿದೆ. ಇದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದ್ದು, ಚೀನಾ ತಂಡವರು ಕಂಪನಿಯಲ್ಲಿ ಸಾಫ್ಟ್‌ವೇರ್‌ ಅಳವಡಿಕೆಯಲ್ಲಿ ತೊಡಗಿರುವುದು.

Advertisement

ಕೊರೊನ ವೈರಸ್‌ ಬಗ್ಗೆ ಆತಂಕ ಬೇಡ: ಜಿಲ್ಲೆಯಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳು ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಚೀನಾ ಸೇರಿದಂತೆ ಇತರೆ ದೇಶಗಳ ಜನರು ಭೇಟಿ ನೀಡುತ್ತಾರೆ. ಕೊರೊನಾ ವೈರಸ್‌ ಆತಂಕವಿದ್ದರಿಂದ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದ ಚೀನಾ ತಂಡದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಅಂತಹ ವೈರಸ್‌ ಲಕ್ಷಣಗಳು ಇಲ್ಲದಿರುವುದು ಕಂಡುಬಂದಿದೆ. ಹೀಗಾಗಿ ಜಿಲ್ಲೆಯ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಪಷ್ಟಪಡಿಸಿದರು.

ಸರ್ವೇಕ್ಷಣಾಧಿಕಾರಿ ಚಾರಿಣಿ ಸ್ಪಷ್ಟನೆ: ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಚಾರಣಿ, ಹೋಟೆಲ್‌ ಸಿಬ್ಬಂದಿಯ ಮಾಹಿತಿ ಮೇರೆಗೆ ಚೀನಾ ತಂಡದವರನ್ನು ಭೇಟಿ ಮಾಡಿ ಅವರ ಕಫಾ ಹಾಗೂ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್‌ಗ ಕಳುಹಿಸಲಾಗಿತ್ತು. ಅದರಂತೆ ಅವರಲ್ಲಿ ಕೊರೊನದ ಯಾವುದೇ ಲಕ್ಷಣಗಳು ಇಲ್ಲದಿರುವುದು ಕಂಡುಬಂದಿದೆ ಎಂದು ಸ್ಪಷ್ಟನೆ ನೀಡಿದರು.

ಭಾಷೆ ಅರ್ಥವಾಗದೆ, ಅಧಿಕಾರಿಗಳ ಪರದಾಟ: ಕೊರೊನಾ ವೈರಸ್‌ ಕುರಿತು ಸಾರ್ವಜನಿರಲ್ಲಿ ಹರಡಿರುವ ಆತಂಕದ ಕುರಿತು ಚೀನಿಯರಿಗೆ ಆರ್ಥ ಮಾಡಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸ ಪಟ್ಟಿರುವ ಘಟನೆ ನಡೆದಿದೆ.

ಚೀನಾ ತಂಡವರಿಗೆ ಭಾರತೀಯ ಇಂಗ್ಲಿಷ್‌ ಅರ್ಥವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೇಳಬೇಕಿರುವ ವಿಷಯ ಮುಟ್ಟಿಸಲು ಕೊನೆಗೆ ಗೂಗಲ್‌ ಟ್ರಾನ್ಸ್‌ಲೇಟರ್‌ ಬಳಸಬೇಕಾಯಿತು. ನಾನು ಹೇಳಬೇಕಾದ ವಿಷಯವನ್ನು ಗೂಗಲ್‌ ಟ್ರಾನ್ಸ್‌ಲೇಟರ್‌ನಲ್ಲಿ ಇಂಗ್ಲಿಷ್‌ನಲ್ಲಿ ಟೈಪ್‌ ಮಾಡಿ ಚೀನಾ ಭಾಷೆಗೆ ಭಾಷಾಂತರ ಮಾಡಿ ಅವರಿಗೆ ಮನವರಿಗೆ ಮಾಡಿಕೊಡಲಾಯಿತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next