Advertisement

Chincholi: ಸಿಡಿಲು ಬಡಿದುಕೂಲಿ‌ ಕಾರ್ಮಿಕ ಮಹಿಳೆ‌ ಮೃತ್ಯು,ಪುತ್ರನಿಗೆ ಗಂಭೀರ ಗಾಯ

11:03 PM May 10, 2024 | Team Udayavani |

ಚಿಂಚೋಳಿ: ತಾಲೂಕಿನ ‌ಕುಂಚಾವರಂ‌ ಗಡಿಪ್ರದೇಶದ ಬೋನಸಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಸಿಡಿಲು ಬಡಿದು ಒರ್ವ‌ಕೂಲಿ‌ಕಾರ್ಮಿಕ ಮಹಿಳೆ‌ ಮೃತಪಟ್ಟಿದ್ದಾಳೆ. ಸಿಡಿಲಿಗೆ ಸಾಕು‌ ನಾಯಿ‌ಮೃತಪಟ್ಟಿದೆ ಆಕೆಯ ಮಗ‌ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

Advertisement

ಬೋನಸಪುರ ಗ್ರಾಮದ ಸ್ವಪ್ನ ಮಾಣಿಕರಾವ (45) ಮೃತ ದುರ್ದೈವಿ ಮಹಿಳೆ. ಶುಕ್ರವಾರ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಭಾರಿ ಬಿರುಗಾಳಿ ಸಿಡಿಲು ಮಿಂಚು ಗುಡುಗು ಸಹಿತ ಭಾರಿ ಮಳೆ ಆಗುವ ಸಂದರ್ಭದಲ್ಲಿ ಮಾವಿನ‌ಮರದ ಕೆಳಗೆ ನಿಂತಾಗ ಸಿಡಿಲು ಬಡಿದಾಗ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಜತೆಯಲ್ಲಿ ಇದ್ದ ನಾಯಿಯೂ ಸಾವನ್ನಪ್ಪಿದೆ. ಅಲ್ಲದೇ ಮೃತಳ ಪುತ್ರ ಜ್ಞಾನೇಶ್ವರ ಮಾಣಿಕರಾವ ಗಂಭೀರ ಗಾಯಗೊಂಡ ಕಾರಣ ಆತನನ್ನು ಬೀದರ್ ಸರಕಾರಿ ಆಸ್ಪತ್ರೆ ಬೀಮ್ಸಗೆ ಸೇರಿಸಲಾಗಿದೆ.

ಘಟನಾ ಸ್ಥಳಕ್ಕೆ ತಹಶೀರ‌ ಮಲ್ಲಿಕಾರ್ಜುನ ಅರಕೇರಿ, ಕುಂಚಾವರಂ ಪೋಲಿಸರು ಭೇಟಿ ‌ನೀಡಿದ್ದಾರೆ. ಮೃತಪಟ್ಟ ಮಹಿಳೆಯ ಶವ‌ ಕುಂಚಾವರಂ ಸರಕಾರಿ ಸಮುದಾಯ ಆಸ್ಪತ್ರೆಗೆ ಸೇರಿಸಲಾಗಿದೆ. ಸಿಡಿಲು ಬಡಿದು ಮೃತಪಟ್ಟ ಮಹಿಳೆ ಕುಟುಂಬದವರ ಆಸ್ಪತ್ರೆಯ ಮುಂದೆ ಅಳುವ ದೃಶ್ಯ ಮನಕಲಕುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next