Advertisement

ಯಾವ ಮುಖ ಇಟ್ಟುಕೊಂಡು ಚಿಂಚನಸೂರ್‌ ಕಾಂಗ್ರೆಸ್‌ಗೆ ಹೋಗ್ತಾರೆ? : ಆರ್‌.ಅಶೋಕ್‌

09:12 PM Mar 21, 2023 | Team Udayavani |

ಬೆಂಗಳೂರು: ಬಾಬುರಾವ್‌ ಚಿಂಚನಸೂರ್‌ ಅವಕಾಶವಾದಿ ರಾಜಕಾರಣಿ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಆರೋಪಿಸಿದರು. ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಪಕ್ಷ ಚಿಂಚನಸೂರ್‌ ಅವರಿಗೆ ಎಲ್ಲವನ್ನೂ ಕೊಟ್ಟಿತ್ತು. ಅಧಿಕಾರ ಅನುಭವಿಸಿ ಇದೀಗ ಕಾಂಗ್ರೆಸ್‌ಗೆ ಹೋಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ವಿಧಾನಪರಿಷತ್‌ ಸದಸ್ಯರಿಗೆ, ಲೋಕಸಭೆ ಸದಸ್ಯರಿಗೆ ಟಿಕೆಟ್‌ ಇಲ್ಲ ಎಂಬುದು ಪಕ್ಷದ ನಿಯಮ. ಇವರಿಗಾಗಿ ಅದನ್ನು ಬದಲಾಯಿಸಲಾಗದು. ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುತ್ತೇನೆಂದು ಬಿಜೆಪಿಗೆ ಬಂದರು. ಇತ್ತೀಚೆಗೆ ಪ್ರಿಯಾಂಕ್‌ ಖರ್ಗೆ ಸೋಲಿಸುತ್ತೇನೆಂದು ತೊಡೆ ತಟ್ಟಿದರು. ಇದೀಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಪ್ರಶ್ನಿಸಿದರು.

ಚಿಂಚನಸೂರ್‌ಗೆ ನಾವು ಗೌರವ, ಸ್ಥಾನ ಕೊಟ್ಟಿದ್ದೆವು. ಆದರೂ ಏಕೆ ಪಕ್ಷ ಬಿಟ್ಟು ಹೋದರೆಂಬುದು ಗೊತ್ತಿಲ್ಲ. ಯಾರ ಜತೆ ಅಡ್ಜಸ್ಟ್‌ಮೆಂಟ್‌ ಮಾಡಿಕೊಂಡು ಹೋದರೋ ಗೊತ್ತಿಲ್ಲ. ಅವರು ಅಲ್ಲಿ ಖುಷಿಯಾಗಿರಲಿ.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next