Advertisement

ಆದಿವಾಸಿ ಮುಖಂಡರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ :ಡಿವೈಎಸ್ ಪಿ ರವಿಪ್ರಸಾದ್ ಮನವಿ

10:23 PM Sep 19, 2021 | Team Udayavani |

ಹುಣಸೂರು: ಆದಿವಾಸಿ ಹಾಗೂ ಬುಡಕಟ್ಟು ಜನರು ತಮ್ಮ ಮಕ್ಕಳ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಶ್ರಮಿಸುವುದರ ಜೊತೆಗೆ ಆದಿವಾಸಿಗಳಲ್ಲಿರುವ ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಯಿಂದ ಹೊರ ಬರಲು ಮುಖಂಡರು ಜಾಗೃತಿ ಮೂಡಿಸಬೇಕೆಂದು ಹುಣಸೂರು ಡಿ,ವೈಎಸ್‌ಪಿ. ರವಿಪ್ರಸಾದ್ ಮನವಿ ಮಾಡಿದರು.

Advertisement

ತಾಲೂಕಿನ ಹನಗೋಡು ಹೋಬಳಿಯ ಹೆಬ್ಬಾಳ ಗಿರಿಜನ ಪುರ್ನವಸತಿ ಕೇಂದ್ರದಲ್ಲಿ ಶನಿವಾರದಂದು ಪೊಲೀಸ್ ಇಲಾಖೆ ಆಯೋಜಿಸಿದ್ದ ಆದಿವಾಸಿ ಹಾಗೂ ಬುಡಕಟ್ಟು ಜನರಿಗಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಆದಿವಾಸಿ ಹಾಗೂ ಬುಡಕಟ್ಟು ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಸವಲತ್ತುಗಳನ್ನು ನೀಡಿ, ನಿಮ್ಮನ್ನು ಮುಖ್ಯವಾಹಿನಿ ತರಲು ಶ್ರಮಿಸುತ್ತಿದೆ. ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆ ಆರಂಭಿಸಿ ಉಚಿತ ಶಿಕ್ಷಣದೊಂದಿಗೆ ಎಲ್ಲ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಮಕ್ಕಳನ್ನು ಕೂಲಿಗೆ ಕರೆದೊಯ್ಯದೆ ವಸತಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿ. ಉನ್ನತ ಶಿಕ್ಷಣಕ್ಕೂ ಸಾಕಷ್ಟು ನೆರವಿದ್ದು, ಬಳಸಿಕೊಳ್ಳಿ, ಅಗತ್ಯ ಉಳ್ಳವರಿಗೆ ತಾವು ಸಹ ಇತತರಿಂದ ನೆರವು ಕೊಡಿಸುವುದಾಗಿ ಭರವಸೆ ಇತ್ತರು.

ತಮ್ಮ ಮಕ್ಕಳನ್ನು ಹದಿಹರೆಯ ವಯಸ್ಸಿನಲ್ಲಿ ವಿವಾಹ ಮಾಡದೆ ಅವರ ಆರೋಗ್ಯದ ಕಡೆಗೂ ಒತ್ತು ನೀಡಬೇಕು. ಹಾಡಿಗಳ ಮುಖಂಡರು ಈ ಬಗ್ಗೆ ಮುತುವರ್ಜಿವಹಿಸಿ ಅರಿವು ಮೂಡಿಸಬೇಕೆಂದು ಸೂಚಿಸಿದರು.

ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಚಿಕ್ಕಸ್ವಾಮಿ ಮಾತನಾಡಿ ಹಾಡಿಗಳಲ್ಲಿ ಅಕ್ರಮ ಚಟುವಟಿಕೆಗಳಾದ ಜೂಜು, ಅಕ್ರಮ ಮದ್ಯ ಮಾರಾಟ, ಗಾಂಜಾ ಬೆಳೆಯುವುದು, ಮಾರಾಟ ಮಾಡುವುದು, ಮದ್ಯಪಾನ ಮಾಡಿ ಗೂಂಡಾವರ್ತನೆ ವರ್ತಿಸುವುದು ಸೇರಿದಂತೆ ಸಾರ್ವಜನಿಕರ ಶಾಂತಿಗೆ ಭಂಗ ತಂದು ಗ್ರಾಮದಲ್ಲಿ ಅಶಾಂತಿ ಉಂಟು ಮಾಡುವ ವ್ಯಕ್ತಿಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಯುವ ಜನತೆ ಎಚ್ಚೆತ್ತುಕೊಂಡು ಹಾಡಿಯಲ್ಲಿ ಸಹಬಾಳ್ವೆ ನಡೆಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ, ಅಕ್ರಮ ಚಟುವಟಿಕೆ ನಡೆಸಲು ಇತರೆಡೆಗಳಿಂದ ಬರುವ ಅಪರಿಚಿತರ ಬಗ್ಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಇದನ್ನೂ ಓದಿ:ಅವಮಾನಿಸಿದ ಪಕ್ಷದಲ್ಲಿ ಇರಬೇಡಿ,ಬಿಜೆಪಿಗೆ ಬನ್ನಿ : ಅಮರೀಂದರ್ ಗೆ ಅಠಾವಳೆ ಆಹ್ವಾನ

Advertisement

ಸಿಡಿಪಿಒ ರಶ್ಮಿ, ಅರಣ್ಯ ಇಲಾಖೆಯ ಪುನರ್ವಸತಿ ಸಮಿತಿಯ ಆರ್‌ಎಫ್‌ಒ ರಶ್ಮಿ, ಪರಿಶಿಷ್ಟ ವರ್ಗಗಳ ಇಲಾಖೆಯ ವಿಸ್ತಿರಣಾಧಿಕಾರಿ ಶಂಕರ್, ಹನಗೋಡು ಉಪತಹಶೀಲ್ದಾರ್ ಚಲುವರಾಜ್ ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಪುರ್ನವಸತಿ ಕೇಂದ್ರದ ಅಧ್ಯಕ್ಷ ಚಂದ್ರು ಮಾತನಾಡಿ ಶೆಟ್ಟಹಳ್ಳಿ ಹಾಗೂ ಹೆಬ್ಬಾಳ ಗಿರಿಜನ ಪುರ್ನವಸತಿ ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡಬ್ಯೂಸಿಎಸ್ ಸಂಸ್ಥೆಯ ವಿನೋದ್, ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಆಧ್ಯಕ್ಷ ಶಂಕರ್, ಗಿರಿಜನ ಮುಖಂಡರಾದ ಪುಟ್ಟಸ್ವಾಮಿ, ಲಿಂಗಯ್ಯ, ಕೆ.ಸ್ವಾಮಿ, ಮಹೇಶ್, ಸೇರಿದಂತೆ ಗ್ರಾಮಸ್ಥರು ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next