Advertisement

“ಮಕ್ಕಳಿಗೆ ಕಲಿಕೆಯೊಂದಿಗೆ ಕಲೆಯ ಒಲವು ಅಗತ್ಯ’

07:40 AM Aug 04, 2017 | Team Udayavani |

ತೆಕ್ಕಟ್ಟೆ: ಮಕ್ಕಳು ತಮ್ಮ ಕಲಿಕೆಯ ಜೊತೆಗೆ ಇಂತಹ ಕಲಾ ಮಾಧ್ಯಮಗಳನ್ನು ಅಳವಡಿಸಿಕೊಳ್ಳಬೇಕಾದ ಅಗತ್ಯ ಇದೆ ಎಂದು ಉಪನ್ಯಾಸಕ, ವಿಮರ್ಶಕ ಕೋಟ ಸುಜಯೀಂದ್ರ ಹಂದೆ ಹೇಳಿದರು.

Advertisement

ಅವರು ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ  ಮಲ್ಯಾಡಿ ಯಕ್ಷಕಲಾ ಟ್ರಸ್ಟ್‌ (ರಿ.) ಆಶ್ರಯದಲ್ಲಿ ನಡೆದ ಪೇಪರ್‌ ಕ್ರಾಫ್ಟ್‌  ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕಲಾವಿದ ರವಿಪ್ರಸಾದ್‌ ಆಚಾರ್ಯ ಗೋಳಿಯಂಗಡಿ, ಕೈಲಾಸ ಕಲಾ ಟ್ರಸ್ಟ್‌ನ ಅಧ್ಯಕ್ಷ  ಸೀತಾರಾಮ ಶೆಟ್ಟಿ ಕೊçಕೂರು, ಬೆಂಗಳೂರು ಯಕ್ಷದೇಗುಲ ಇದರ ಸಂಚಾಲಕ ಸುದರ್ಶನ ಉರಾಳ ಕೋಟ, ಕಲಾವಿದ ಗಿರೀಶ್‌ ಆಚಾರ್ಯ ವಕ್ವಾಡಿ, ಯಶಸ್ವಿ ಕಲಾ ವೃಂದ ಕೊಮೆ ತೆಕ್ಕಟ್ಟೆ  ಇದರ ಸಂಘಟಕ ವೆಂಕಟೇಶ್‌ ವೈದ್ಯ ಕೊಮೆ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next