Advertisement

ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ: ಜಿ.ಮಟ್ಟದ ತರಬೇತಿ

12:45 AM Feb 10, 2019 | Team Udayavani |

ಮಣಿಪಾಲ: ಪಡಿ ಸಂಸ್ಥೆ ಮಂಗಳೂರು ಮತ್ತು ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮಾಹೆ ಮಣಿಪಾಲ ಹಾಗೂ ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ರಕ್ಷಣಾ ನೀತಿ’ಯ ಬಗ್ಗೆ ಜಿಲ್ಲಾ ಮಟ್ಟದ ಎರಡು ದಿನಗಳ ಕಾರ್ಯಾಗಾರವು ಮಣಿಪಾಲ ವಿಶ್ವವಿದ್ಯಾಲಯದ ಹೆಲ್ತ್‌ ಸೈನ್ಸ್‌ ಲೈಬ್ರರಿಯ ಸಭಾಂಗಣದಲ್ಲಿ ನಡೆಯಿತು.

Advertisement

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್‌ ಕಾರ್ಯಾಗಾರ ಉದ್ಘಾಟಿಸಿದರು. ಪಡಿ ಸಂಸ್ಥೆಯ ನಿರ್ದೇಶಕ ರೆನ್ನಿ ಡಿ’ಸೋಜಾ ಕಾರ್ಯಾಗಾರದ ಬಗ್ಗೆ ತಿಳಿಸಿದರು.

ಸಭೆಯಲ್ಲಿ ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ನ ಮುಖ್ಯಸ್ಥ ಲೆನಾ ಅಶೋಕ್‌ ಹಾಗೂ ಕಾರ್ಕಳ ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಾಧಿಕಾರಿ ಸತೀಶ್‌ ನಾಯ್ಕ ಮತ್ತು ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷರಾದ ಸುಲೋಚನಾ ಕೊಡವೂರು ಮತ್ತು ಐಡಾ ಡಿ’ಸೋಜಾ, ಸಹ ಉಪನ್ಯಾಸಕರು, ಪ್ರಸನ್ನ ಸ್ಕೂಲ್‌ ಆಫ್ ಪಬ್ಲಿಕ್‌ ಹೆಲ್ತ್‌ ಮಾಹೆ ಮಣಿಪಾಲ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಮೋಹನ್‌ ಕುಮಾರ್‌, ಅಬ್ದುಲ್‌ ಸಲಾಂ, ಅಧ್ಯಕ್ಷರು ಎಸ್‌.ಡಿ.ಎಂ.ಸಿ. ಸಮನ್ವಯ ವೇದಿಕೆ, ಎಲ್ಲಾ ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಅಧ್ಯಕ್ಷರು, ಸದಸ್ಯರು ,ಜಿಲ್ಲಾ ಮತ್ತು ತಾ| ಸಂಯೋಜಕರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಆನಂದ ಬಿ. ಲೋಬೋ ಕಾರ್ಯಾಗಾರ ನಡೆಸಿದರು. ಉಡುಪಿ, ಕುಂದಾಪುರ , ಕಾರ್ಕಳ ತಾಲೂಕಿನ ಆಯ್ದ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಸಿ.ಆರ್‌.ಪಿ., ಬಿ.ಆರ್‌.ಪಿ., ಎಸ್‌.ಡಿ.ಎಂ.ಸಿ. ಸದಸ್ಯರು ಉಪಸ್ಥಿತರಿದ್ದರು.

ತಾ| ಶಿಕ್ಷಣ ಸಂಪನ್ಮೂಲ ಕೇಂದ್ರದ ಸಲಹೆಗಾರರು ಮತ್ತು ರಾಜ್ಯ ಮಟ್ಟದ ತರಬೇತಿದಾರ ಎಚ್. ಜಯವಂತ ರಾವ್‌ ನಿರೂಪಿಸಿದರು. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಸುಲೋಚನಾ ಕೊಡವೂರು ಸ್ವಾಗತಿಸಿದರು. ಪಡಿ ಸಂಸ್ಥೆಯ ದಾಖಲಾತಿ ಸಂಯೋಜಕ ಚಂದ್ರಶೇಖರ್‌ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next