Advertisement

ಹಿರೇಮಗಳೂರಲ್ಲಿ ಕ್ವಾರಂಟೈನ್‌ಗೆ ವಿರೋಧ

05:32 PM May 15, 2020 | Team Udayavani |

ಚಿಕ್ಕಮಗಳೂರು: ಹೊರರಾಜ್ಯ ಮತ್ತು ವಿದೇಶದಿಂದ ಬಂದರವರನ್ನು ಕ್ವಾರಂಟೈನ್‌ನಲ್ಲಿಡಲು ಹಿರೇಮಗಳೂರು ರಸ್ತೆಯಲ್ಲಿರುವ ಲಾಡ್ಜ್ಗಳಲ್ಲಿ ಗುರುತಿಸಿ ಸಿದ್ಧತೆ ನಡೆಸುತ್ತಿರುವುದನ್ನು ಗ್ರಾಮಸ್ಥರು ಖಂಡಿಸಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅವರಿಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲೆಯನ್ನು ಹಸಿರು ವಲಯವಾಗಿ ಕಾಪಾಡಲು ವೈದ್ಯರು, ಪೊಲೀಸರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಜನಪ್ರತಿನಿಧಿಗಳು ಹಗಲಿರುಳೆನ್ನದೆ ಶ್ರಮಿಸಿದ್ದಾರೆ. ಹಸಿರು ವಲಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಹೊರಗಿನಿಂದ ಬಂದವರಿಗೆ ನಗರದೊಳಗೆ ಕ್ವಾರಂಟೈನ್‌ ಮಾಡಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

ಹಿರೇಮಗಳೂರು ಬಡಾವಣೆ ಜನವಸತಿ ಪ್ರದೇಶ ಬಿಟ್ಟು ಬೇರೆ ಪ್ರದೇಶದಲ್ಲಿ ಕ್ವಾರಂಟೈನ್‌ ಮಾಡಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಗ್ರಾಮಸ್ಥರಾದ ಬಿ.ರೇವನಾಥ್‌, ರಾಮಚಂದ್ರ, ಕೇಶವ, ಸಂಜೈ, ಧನಂಜಯ, ಪ್ರಸಾದ್‌, ಲೋಕೇಶ್‌, ಶ್ರೀಧರ್‌, ಮಂಜುನಾಥ್‌, ತಾರೇಶ್‌, ಚಂದ್ರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next