Advertisement

ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ತತ್ತರಿಸಿದ ಜನತೆ, ಹೆಬ್ಬಾಳೆ ಸೇತುವೆ ಮುಳುಗಡೆ ಆತಂಕ

11:31 AM Aug 05, 2020 | Mithun PG |

ಚಿಕ್ಕಮಗಳೂರು:  ಚಿಕ್ಕಮಗಳೂರು ಜಿಲ್ಲೆಯ ಮಲೆನಾಡ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಗೆ ಜನತೆ ತತ್ತರಿಸಿ ಹೋಗಿದ್ದು,  ಹ್ಯಾಂಡ್ ಪೋಸ್ಟ್, ಮುತ್ತಿಗೆಪುರ, ಅಣಜೂರಿನಲ್ಲಿ ಮರಗಳು ಧರೆಗುರುಳಿವೆ.

Advertisement

ಜಿಲ್ಲೆಯ ಮೂಡಿಗೆರೆ ತಾಲೂಕಿನ ಗ್ರಾಮದ ಹಲವೆಡೆ ಮರಗಳು ರಸ್ತೆಗುರುಳಿದ ಪರಿಣಾಮ, ವಿದ್ಯುತ್ ಕಂಬಗಳು ಕೂಡ ಧರಾಶಾಯಿಯಾಗಿವೆ.  ಬಿರುಗಾಳಿ ಸಹಿತ ಮಳೆಯಬ್ಬರಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ವರುಣನ ಅಬ್ಬರಕ್ಕೆ ಭದ್ರಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು,  ಕಳೆದ ರಾತ್ರಿ ಒಂದು ಬಾರಿ‌ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಮಾತ್ರವಲ್ಲದೆ ಸೇತುವೆ ಮೇಲೆ ಮರದ ದಿಣ್ಣೆಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ  ಅಡ್ಡಿಯಾಗುತ್ತಿದೆ.

ಇದೀಗ ಭದ್ರಾ ನೀರು ಸೇತುವೆಗೆ ಅಪ್ಪಳಿಸುತ್ತಿದ್ದು, ಮುಳುಗಡೆಯಾಗಲು ಒಂದು ಅಡಿಯಷ್ಟೆ ಬಾಕಿಯಿದೆ.  ಸೇತುವೆ ಮಳುಗಡೆಯಾದರೆ  ಹೊರನಾಡು – ಕಳಸ ಸಂಪರ್ಕ ಸಂಪೂರ್ಣ ಕಡಿವಾಗಲಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next