Advertisement

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು

01:10 PM Oct 08, 2019 | Suhan S |

ಚಿಕ್ಕಮಗಳೂರು : ಕರೆಯಲ್ಲಿ ಈಜಲು ಹೋದ ಮೂವರು ಬಾಲಕರು ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಮಗಳೂರು ತಾಲೂಕಿನ ಬಿಳೇಕಲ್ ಸಮೀಪದ ಕೆಂಚಿನಕಟ್ಟೆ ಕೆರೆಯಲ್ಲಿ ನಡೆದಿದೆ.

Advertisement

ಮೃತರನ್ನು ಜೀವಿತ್ (14), ಮುರುಳಿ ಕಾರ್ತಿಕ್ (15), ಚಿರಾಗ್ (16) ಎಂದು ಗುರುತಿಸಲಾಗಿದ್ದು,ನಿನ್ನೆ ಸಂಜೆಯ ವೇಳೆ ಆಯುಧ ಪೂಜೆ ಮುಗಿಸಿಕೊಂಡು ಈಜಲು ಹೋಗಿದ್ದರು ಎನ್ನಲಾಗಿದೆ.ಮೃತ ಮೂವರು ಸಹ ಚಿಕ್ಕಮಗಳೂರು ನಗರದ ಹೌಸಿಂಗ್ ಬೋರ್ಡ್‌ ನಿವಾಸಿಗಳೆನ್ನಲಾಗಿದೆ.

ಇಬ್ಬರು ಮೃತ ಬಾಲಕರು ಬಿಜಿಎಸ್ ಶಾಲೆಯ 8 ನೇ ತರಗತಿ ವಿದ್ಯಾರ್ಥಿಗಳು  ಮುರುಳಿ ಕಾರ್ತಿಕ್, ಜೀವಿತ್ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳು ಚಿರಾಗ್ ಸಾಯಿ ಏಂಜಲ್ ಶಾಲೆಯ 10 ನೇ ವಿದ್ಯಾರ್ಥಿಗಳಾಗಿದ್ದರು. ಸಧ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next