Advertisement

ಚಿಕ್ಕಮಗಳೂರು: ಸಿಸಿಟಿವಿ ಸಂಪರ್ಕ ತಪ್ಪಿಸಿ ದೇವಸ್ಥಾನದ ಹುಂಡಿಯ ಹಣ ದೋಚಿದ ಕಳ್ಳರು

11:15 AM Feb 18, 2021 | Team Udayavani |

ಚಿಕ್ಕಮಗಳೂರು: ಕಿಟಕಿ ಒಡೆದು ದೇವಸ್ಥಾನದ ಹುಂಡಿಯ ಹಣ ದೋಚಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.

Advertisement

ಶ್ರೀ ರಾಮಂಜನೇಯ ಸ್ವಾಮಿ ದೇವಸ್ಥಾನದ ಒಳಗೆ ಪ್ರವೇಶಿಸಿರುವ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಕೂಡ ಇದೇ ರೀತಿ ಹುಂಡಿ ಕಳ್ಳತನ ಮಾಡಲಾಗಿತ್ತು. ಆ ಬಳಿಕ ಸಿಸಿಟಿವಿ, ಸೈರನ್ ವ್ಯವಸ್ಥೆ ಮಾಡಲಾಗಿತ್ತು. ಕಳ್ಳತನಕ್ಕಿಳಿಯೋ ಮೊದಲು ಸಿಸಿಟಿವಿ ಸಂಪರ್ಕ ತಪ್ಪಿಸಿ ಕೃತ್ಯ ಎಸಗಿದ್ದಾರೆ.

ಬೆಳಗ್ಗೆ ಗ್ರಾಮದ ದೇವಾಲಯದಲ್ಲಿ ಕಳ್ಳತನವಾಗಿರುವುದನ್ನ ಕಂಡು ಜನರು ಆತಂಕಕ್ಕೊಳಗಾಗಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next