Advertisement

ಚಿಕ್ಕಮಗಳೂರು ; ಹಣದ ವಿಚಾರ ಶಾಲೆಯಲ್ಲಿ ಪ್ರಿನ್ಸಿಪಲ್, ಸೆಕ್ರೆಟರಿ ಮಾರಾಮಾರಿ

05:22 PM Jun 04, 2020 | sudhir |

ಚಿಕ್ಕಮಗಳೂರು : ಹಣದ ವ್ಯವಹಾರಕ್ಕೆ ಸಂಬಂಧಿಸಿ ಶಾಲೆಯ ಪ್ರಿನ್ಸಿಪಲ್ ಹಾಗೂ ಸೆಕ್ರೆಟರಿ ನಡುವೆ ಮಾರಾಮಾರಿ ನಡೆದ ಘಟನೆ ನಗರದ ಉಪ್ಪಳ್ಳಿ ಯುನಿಟೆಡ್ ಶಾಲೆಯಲ್ಲಿ ಗುರುವಾರ ನಡೆದಿದೆ.

Advertisement

ಶಾಲೆಯ ಶಿಕ್ಷಕರ ಕೊಠಡಿಯಲ್ಲಿ ಹಣದ ವಿಚಾರವಾಗಿ ಶಾಲೆಯ ಪ್ರಿನ್ಸಿಪಾಲ್ ಹಾಗೂ ಸೆಕ್ರೆಟರಿ ನಡುವೆ ಹೊಡೆದಾಟ ನಡೆದು ನಂತರ ಮಹಿಳೆಯರು, ಪುರುಷರು ಎನ್ನದೆ ಎಲ್ಲರು ಸೇರಿ ಹೊಡೆದಾಟ ನಡೆಸಿದ್ದಾರೆ.

ಶಾಲೆಯ ಪ್ರಾಂಶುಪಾಲ ಸಲೀಂ ಹಾಗೂ ಸೆಕ್ರೇಟರಿ ಜಮೀರ್ ನಡುವೆ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ ಇದೆ ಸಂದರ್ಭ ಅಲ್ಲಿದ್ದ ಮಹಿಳೆಯರು ಸೇರಿಕೊಂಡಿದ್ದು ಶಾಲೆಯಲ್ಲಿ ಬಡಿದಾಡಿಕೊಂಡ ವಿಡಿಯೋ ವೈರಲ್ ಆಗುತಿದ್ದು ಇದರಿಂದ 20 ವರ್ಷಗಳ ಇತಿಹಾಸವುಳ್ಳ ಶಾಲೆಯ ಮಾನ ಒಂದೇ ನಿಮಿಷದಲ್ಲಿ ಹರಾಜಾದಂತೆ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next